ದಿನಭವಿಷ್ಯ 17-11-2017

Public TV
2 Min Read

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಮಧ್ಯಾಹ್ನ 3:30 ನಂತರ ಅಮಾವಾಸ್ಯೆ
ಶುಕ್ರವಾರ, ಸ್ವಾತಿ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28

ರಾಹುಕಾಲ: ಬೆಳಗ್ಗೆ 10:41 ರಿಂದ 12:08
ಗುಳಿಕಕಾಲ: ಬೆಳಗ್ಗೆ 7:47 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:29

ಮೇಷ: ಕೋರ್ಟ್ ಕೇಸ್‍ಗಳಲ್ಲಿ ಜಯ, ಶತ್ರುಗಳ ಭೀತಿ ನಿವಾರಣೆ, ಮಾನಸಿಕ ವ್ಯಥೆ, ಮನಸ್ಸಿನಲ್ಲಿ ಆತಂಕ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ವೃಷಭ: ಸ್ವಯಂಕೃತ್ಯಗಳಿಂದ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ, ಮಕ್ಕಳ ಭವಿಷ್ಯದ ಚಿಂತೆ.

ಮಿಥುನ: ಮಕ್ಕಳಿಂದ ಧನಾಗಮನ, ಸ್ಥಿರಾಸ್ತಿ-ವಾಹನದಿಂದ ನಷ್ಟ, ನಂಬಿಕಸ್ಥರಿಂದ ಮೋಸ, ದುಶ್ಚಟಗಳಿಗೆ ಮನಸ್ಸು.

ಕಟಕ: ಸ್ಥಿರಾಸ್ತಿ ಖರೀದಿಯಲ್ಲಿ ಮೋಸ, ಬಂಡವಾಳ ಹೂಡಿಕೆಯಲ್ಲಿ ಎಚ್ಚರ, ಆತುರ ಸ್ವಭಾವ, ಮೊಂಡುತನ, ಆತ್ಮೀಯರೊಂದಿಗೆ ಮನಃಸ್ತಾಪ.

ಸಿಂಹ: ಸ್ವಯಂಕೃತ್ಯಗಳಿಂದ ನಷ್ಟ, ಹಣಕಾಸು ಸಂಕಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ.

ಕನ್ಯಾ: ಚರ್ಮ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಮುಗ್ಗಟ್ಟು, ಸಂಕಷ್ಟಕ್ಕೆ ಸಿಲುಕುವಿರಿ, ನೀವಾಡುವ ಮಾತಿನಿಂದ ಜಗಳ.

ತುಲಾ: ಉದ್ಯೋಗದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಮಾನಸಿಕ ಚಿಂತೆ, ಮಾಟ-ಮಂತ್ರದ ಭೀತಿ.

ವೃಶ್ಚಿಕ: ಸಾಲ ತೀರಿಸುವ ಯೋಗ, ಶತ್ರುಗಳ ಉಪಟಳ, ಕೆಲಸಗಾರರ ಕೊರತೆ, ಸಹೋದರನಿಂದ ಮೋಸ, ಮಾನಸಿಕ ವ್ಯಥೆ, ಅಕ್ರಮ ಸಂಪಾದನೆ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರಿಂದ ಆತಂಕ, ಆಕಸ್ಮಿಕ ಅದೃಷ್ಟ ಪ್ರಾಪ್ತಿ, ಗೌರವ ಸನ್ಮಾನ ಲಭಿಸುವುದು, ಮಕ್ಕಳಿಗೆ ಪೆಟ್ಟಾಗುವುದು.

ಮಕರ: ತಂದೆ ಮೇಲೆ ಅನುಮಾನ, ಆಕಸ್ಮಿಕ ದುರ್ಘಟನೆ, ದೂರ ಪ್ರಯಾಣ, ಮೇಲಾಧಿಕಾರಿಗಳಿಂದ ಕಿರಿಕಿರಿ, ಬಡ್ತಿಯಲ್ಲಿ ಹಿನ್ನಡೆ.

ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ವಾಹನ ಅಪಘಾತ ಸಾಧ್ಯತೆ, ಪ್ರಯಾಣದಲ್ಲಿ ಎಚ್ಚರ, ಬಂಧುಗಳಿಂದ ಹೇಳಿಕೆ ಮಾತು, ತಂದೆಯನ್ನೇ ಶತ್ರುವಾಗಿ ಕಾಣುವಿರಿ.

ಮೀನ: ಅಕ್ರಮ ಸಂಬಂಧಗಳಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಸ್ನೇಹಿತರಿಂದ ತೊಂದರೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆಕಸ್ಮಿಕ ದುರ್ಘಟನೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.

Share This Article
Leave a Comment

Leave a Reply

Your email address will not be published. Required fields are marked *