ಶ್ರೀ ವಿಶ್ವಾವಸನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಕೃಷ್ಣ ಪಕ್ಷ, ಪಂಚಮಿ / ಷಷ್ಟಿ,
ಶುಕ್ರವಾರ, ಭರಣಿ ನಕ್ಷತ್ರ / ಕೃತಿಕ ನಕ್ಷತ್ರ
ರಾಹುಕಾಲ – 10:47 ರಿಂದ 12:19
ಗುಳಿಕಕಾಲ – 07:43 ರಿಂದ 09:15
ಯಮಗಂಡ ಕಾಲ – 03:23 ರಿಂದ 04:55
ಮೇಷ: ಕೆಲಸಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು.
ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳಿಂದ ನೋವು.
ಮಿಥುನ: ಅಧಿಕ ಧನವ್ಯಯ, ಸರ್ಕಾರಿ ಅಧಿಕಾರಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.
ಕಟಕ: ಅಧಿಕ ಲಾಭ, ಸಂಕಷ್ಟದಿಂದ ಮುಕ್ತಿ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು.
ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಖರ್ಚು, ಉದ್ಯೋಗನಿಮಿತ್ತ ದೂರಪ್ರಯಾಣ.
ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.
ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ, ಅದೃಷ್ಟ ಒಲಿದು ಬರುವುದು.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.
ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳ ದರ್ಶನ.
ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್ ಕೋರ್ಟ್ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಭೇಟಿ, ದುರಾಲೋಚನೆಗಳು ಹೆಚ್ಚು
.
ಕುಂಭ: ಆಸ್ತಿ ಅಥವಾ ವಾಹನ ಮಾರಾಟದ ಯೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.
ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಜಯ.