ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ತ್ರಯೋದಶಿ
ನಕ್ಷತ್ರ: ಜೇಷ್ಠ
ರಾಹುಕಾಲ: 3.40 ರಿಂದ 5.16
ಗುಳಿಕಕಾಲ: 12.28 ರಿಂದ 2.04
ಯಮಗಂಡಕಾಲ: 9.16 ರಿಂದ 10.52
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಲ್ಲಿ ಗೊಂದಲ.
ವೃಷಭ: ನಿಷ್ಠುರದ ಮಾತುಗಳು ಬೇಡ, ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ, ಆರೋಗ್ಯದ ಬಗ್ಗೆ ಎಚ್ಚರ.
ಮಿಥುನ: ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಗೌರವ, ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿ ಗಳಿಕೆ, ದುಷ್ಟ ಜನರಿಂದ ತೊಂದರೆ.
ಕಟಕ: ಆಪ್ತರಿಂದ ಸಹಾಯ, ಅನಿರೀಕ್ಷಿತ ದೂರ ಪ್ರಯಾಣ, ಶತ್ರು ಭಾದೆ, ಧನ ಪ್ರಾಪ್ತಿ.
ಸಿಂಹ: ಈ ದಿನ ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ, ಮನಕ್ಲೇಶ.
ಕನ್ಯಾ: ಈ ದಿನ ಹಣದ ತೊಂದರೆ, ವ್ಯಾಸಂಗಕ್ಕೆ ತೊಂದರೆ, ಚಂಚಲ ಮನಸ್ಸು, ಮಾತಾಪಿತರಲ್ಲಿ ವಾತ್ಸಲ್ಯ.
ತುಲಾ: ಈ ದಿನ ಪಾಪ ಬುದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಗುರು ಹಿರಿಯರ ಭೇಟಿ, ಮನಶಾಂತಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಋಣ ಭಾದೆ, ಅಧಿಕ ಖರ್ಚು.
ಧನಸ್ಸು: ಶುಭ ವಾರ್ತೆ ಕೇಳುವಿರಿ, ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಅಭಿವೃದ್ಧಿ.
ಮಕರ: ಪರಸ್ಥಳ ವಾಸ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಸೇವಕರಿಂದ ತೊಂದರೆ, ವಾಹನ ರಿಪೇರಿ.
ಕುಂಭ: ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ, ಅಲ್ಪ ಆದಾಯ ಅಧಿಕ ಖರ್ಚು.
ಮೀನ: ರಿಯಲ್ ಎಸ್ಟೇಟ್ನವರಿಗೆ ಲಾಭ, ವಿನಾಕಾರಣ ಯೋಚನೆ, ಉದ್ಯಮಿಗಳಿಗೆ ಸುದಿನ, ಸುಗಂಧ ದ್ರವ್ಯಗಳಿಂದ ಲಾಭ.