ದಿನ ಭವಿಷ್ಯ:03-09-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:44 ರಿಂದ 9:17
ಗುಳಿಕಕಾಲ: ಮಧ್ಯಾಹ್ನ 1:54 ರಿಂದ 9:17
ಯಮಗಂಡಕಾಲ: ಬೆಳಗ್ಗೆ 10:49 ರಿಂದ 12:22

ಮೇಷ: ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಖರೀದಿ ಯೋಗ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದ್ರವ್ಯ ಲಾಭ, ಮಾನಸಿಕ ನೆಮ್ಮದಿ.

ವೃಷಭ: ನಾನಾ ರೀತಿಯ ಸಂಪಾದನೆ, ವಿಪರೀತ ದುಶ್ಚಟ ವ್ಯಸನ, ವಿದೇಶ ಪ್ರಯಾಣ, ಆತ್ಮೀಯರ ಭೇಟಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ.

ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಇಲ್ಲ ಸಲ್ಲದ ಅಪವಾದ, ಮಾನಸಿಕವಾದ ಅಶಾಂತಿ, ಕೃಷಿಯಲ್ಲಿ ನಷ್ಟ, ವಾಹನ ರಿಪೇರಿ.

ಕಟಕ: ಮನೆಗೆ ಗುರು ಹಿರಿಯರು ಆಗಮನ, ಶತ್ರುಗಳ ನಾಶ, ನೀಚ ಜನರ ಸಹವಾಸದಿಂದ ಸಂಕಷ್ಟ, ನಂಬಿದ ಜನರಿಂದ ಮೋಸ.

ಸಿಂಹ: ಆತ್ಮೀಯರಿಂದ ಸಹಾಯ, ವೃಥಾ ಧನವ್ಯಯ, ಅಭಿವೃದ್ಧಿ ಕುಂಠಿತ, ಯತ್ನ ಕಾರ್ಯದಲ್ಲಿ ವಿಳಂಬ.

ಕನ್ಯಾ: ಆಸ್ತಿ ತಗಾದೆ ಬಗೆಹರಿಯುವುದು, ಸ್ತ್ರಿಯರಿಗೆ ಲಾಭ, ಮಾನಸಿಕ ನೆಮ್ಮದಿ, ಓದಿನಲ್ಲಿ ಹೆಚ್ಚು ಸಮಯ ವಿನಿಯೋಗ.

ತುಲಾ: ಅನಾವಶ್ಯಕ ಮಾತುಗಳಿಂದ ದೂರವಿರಿ, ಇಷ್ಟಾರ್ಥಗಳು ಸಿದ್ಧಿಸುವುದು, ಮಾನಸಿಕವಾದ ಒತ್ತಡ.

ವೃಶ್ಚಿಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ವಿವಾಹದ ಮಾತುಕತೆ, ದೂರ ಪ್ರಯಾಣ.

ಧನಸ್ಸು: ಶ್ರಮಕ್ಕೆ ಪ್ರತಿಫಲ ಪ್ರಾಪ್ತಿ, ಮನಸ್ಸಿಗೆ ಸಂತಸ, ದ್ರವ್ಯ ಲಾಭ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ.

ಮಕರ: ಸಾಲದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ಕಿರಿಕಿರಿ. .

ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ-ನಿಂದನೆ, ಮನಸ್ಸಿಗೆ ಬೇಸರ, ಹಣ ಬಂದರೂ ಉಳಿಯುವುದಿಲ್ಲ.

ಮೀನ: ಸ್ವ ಪ್ರಯತ್ನದಿಂದ ಕಾರ್ಯ ಸಿದ್ಧಿ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *