ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ

Public TV
1 Min Read

ಟುಟಿಕೋರಿನ್: ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ಭಾನುವಾರ ‘ಅಸನಿ’ ಚಂಡಮಾರುತವಾಗಲಿದೆ ಎಂದು ತಜ್ಞರು ಸೂಚನೆ ಕೊಟ್ಟಿದ್ದಾರೆ.

ಮಾರ್ಚ್ 21ಕ್ಕೆ ಅಂಡಮಾನ್ ಮತ್ತು ನಿಕೋಬರ್ ದ್ವೀಪಕ್ಕೆ ‘ಅಸನಿ’ ಚಂಡಮಾರುತ ಅಪ್ಪಳಿಸುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ(ಐಂಡಿ) ಮುನ್ಸೂಚನೆಯನ್ನು ಕೊಟ್ಟಿದೆ. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

ʼಅಸನಿ’ ಚಂಡಮಾರುತ ಮೊದಲು ಅಂಡಮಾನ್ ಮತ್ತು ನಿಕೋಬರ್‌ ನಲ್ಲಿ ಪ್ರಾರಂಭವಾಗಿ ಉತ್ತರಾಭಿಮುಖವಾಗಿ ಸಾಗಲಿದ್ದು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಉತ್ತರ ಕರಾವಳಿಯತ್ತ ಬರುತ್ತೆ ಎಂದು ಸೂಚನೆ ಕೊಟ್ಟಿದೆ.

Cyclone Asani, First In 2022, To Form Over Bay Of Bengal Next Week; All You Need To Know

ಈ ಹಿನ್ನೆಲೆ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ಮೀನುಗಾರರು ಮಾರ್ಚ್ 20 ರಿಂದ ಮೂರು ದಿನಗಳ ಕಾಲ ಮೀನುಗಾರಿಕೆ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದೆ. ಅದರಲ್ಲಿಯೂ ಅಂಡಮಾನ್ ಮತ್ತು ನಿಕೋಬರ್ ದ್ವೀಪದ ತೀರ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಘೋಷಣೆ ಮಾಡಬೇಕು. ಆಯಕಟ್ಟಿನ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಬೇಕು ಎಂದು ಸಂಸದ ಕುಲದೀಪ್ ರೈ ಅಗ್ರಹಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಮಾರಕ: ತನ್ವೀರ್ ಸೇಠ್

ಮಾರ್ಚ್ 19(ಇಂದು) ಮತ್ತು 21ರಂದು ಶಾಲಾ ಕಾಲೇಜಯಗಳಿಗೆ ರಜೆ ಫೋಷಿಸುವಂತೆ ಲೆಫ್ಟಿನೆಂಟ್ ಗವರ್ನರ್ ನಿವೃತ್ತ ಅಡ್ಮಿರಲ್ ಡಿ.ಕೆ.ಜೋಶಿಗೆ ಪತ್ರ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *