ನಟ ಲೂಸ್ ಮಾದ ಯೋಗೀಶ್ ಸಿಎಂ ಭೇಟಿ

Public TV
0 Min Read

ಬೆಂಗಳೂರು: ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗೀಶ್ ಇಂದು ಸಿಎಂ ಸಿದ್ದರಾಯಯ್ಯ ಅವರನ್ನು ಭೇಟಿ ಮಾಡಿ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ನೀಡಿದ್ದಾರೆ.

ನಟ ಯೋಗೀಶ್ ಹಾಗೂ ಅವರ ತಂದೆ ಸಿಎಂ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮದುವೆಯ ಆಮಂತ್ರಣ ನೀಡಿ ಆಹ್ವಾನಿಸಿದರು.

ಕಳೆದ ಜೂನ್ 11 ರಂದು ತಮ್ಮ ಬಾಲ್ಯದ ಗೆಳತಿ ಮೈಸೂರಿನ ಅರಸ್ ಕುಟುಂಬಕ್ಕೆ ಸೇರಿರುವ ಸಾಹಿತ್ಯ ಜೊತೆ ಅದ್ಧೂರಿಯಾಗಿ ಯೋಗೀಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ನವೆಂಬರ್ 2 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *