ವಿದ್ಯುತ್ ಪ್ರವಹಿಸಿ ಹಸು ಸಾವು

Public TV
1 Min Read

ಕೊಡಗು: ಜಿಲ್ಲೆಯ ಕುಶಾಲನಗರದ (Kushalnagara) ರಾಧಾಕೃಷ್ಣ ಬಡಾವಣೆಯ ಓಂ ಶಾಂತಿ ಆಶ್ರಮದ ಉದ್ಯಾನದ ಬಳಿ ವಿದ್ಯುತ್ ಸ್ಪರ್ಶಿಸಿ ಹಸು (Cow) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ವಿದ್ಯುತ್ ಸಂಪರ್ಕದ ಟಿಸಿ ಇರುವ ಜೋಡಿ ಕಂಭದ ಬಳಿ ನೆಲದಲ್ಲಿ ಅಳವಡಿಸಿರುವ ಕೇಬಲ್ ತುಂಡರಿಸಿ ಹಸುವಿನ ಕಾಲಿಗೆ ವಿದ್ಯುತ್ ಪ್ರವಹಿಸಿದೆ (Electric shock) ಎನ್ನಲಾಗಿದೆ. ಇದನ್ನೂ ಓದಿ: ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್‌

ಮಕ್ಕಳು ಹೆಚ್ಚಾಗಿ ಆಟವಾಡುವ ಸ್ಥಳ ಇದಾಗಿದೆ. ಶಾಲೆಗಳಿಗೆ ರಜೆ ಬೇರೆ ಇರೋದ್ರಿಂದ ಮಕ್ಕಳು ಅತಿಹೆಚ್ಚು ಸೇರುವ ಸಾಧ್ಯತೆಗಳಿಗೆ ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ನಿನ್ನೆಯೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ವಿದ್ಯುತ್ ಅವಘಡದ ಅಪಾಯದ ಬಗ್ಗೆ ಈ ಹಿಂದೆಯೇ ಸ್ಥಳೀಯ ನಿವಾಸಿಗಳಾದ ರಂಗೇಗೌಡ ಹಾಗು ಪುರಸಭೆ ಮಾಜಿ ಸದಸ್ಯ ಮಧುಸೂದನ್ ಇಲಾಖೆಯ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಹೆಚ್ಚಿದ ಮಳೆ ಅಬ್ಬರ – ಕಪಿಲಾ ನದಿ ತುಂಬಿ ಶಿಶಿಲೇಶ್ವರ ದೇವಸ್ಥಾನ ಜಲಾವೃತ

ಸ್ಥಳಕ್ಕೆ ಧಾವಿಸಿದ ಹಸು ವಾರಸುದಾರ ಮುಳ್ಳುಸೋಗೆಯ ಎಂ.ಎಸ್ ಪ್ರಸನ್ನ ( ರಾಜೇಶ್ ಸೋದರ ) ಮುದ್ದು ಹಸುವಿನ ಧಾರುಣ ಸಾವು ಕಂಡು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನಿತ್ಯವೂ ಹತ್ತಾರು ಲೀ.ಹಾಲು ಕೊಡುತ್ತಿತ್ತು ಎನ್ನಲಾಗಿದೆ.

Share This Article