ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ

Public TV
1 Min Read

ವಿಜಯಪುರ: ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ ಆಕಳನ್ನ ರಕ್ಷಿಸಿದ್ದಾರೆ. ವಿಜಯಪುರ ಕೆ.ಎಸ್.ಆರ್ ಟಿಸಿ ಸಿಬ್ಬಂದಿ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪ್ರಸವ ವೇದನೆಯಿಂದ ಬಳಲುತ್ತಿರುವ ಆಕಳನ್ನ ಕಂಡು ಕೆ.ಎಸ್.ಆರ್.ಟಿ.ಸಿ ಬಸ್ ಸಿಬ್ಬಂದಿ ಹೈರಾಣಾಗಿದ್ದರು. ತಕ್ಷಣವೇ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿದ ಬಸ್ ಸಿಬ್ಬಂದಿ ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

ಬಸ್ ನಿಲ್ದಾಣಕ್ಕೆ ಪಶು ವೈದ್ಯಾಧಿಕಾರಿ ಡಾ.ಶರಣಗೌಡ ಸ್ಥಳಕ್ಕೆ ಧಾವಿಸಿ ಹಸುವನ್ನ ರಕ್ಷಿಸಿದರು. ಇವರಿಬ್ಬರ ಸಹಾಯದಿಂದ ಮುದ್ದಾದ ಕರುವಿಗೆ ಹಸು ಜನ್ಮ ನೀಡಿದೆ. ಗುಮ್ಮಟನಗರಿಯ ಕೆ.ಎಸ್.ಆರ್.ಟಿ. ಸಿ. ಸಿಬ್ಬಂದಿ  ಮಾನವೀಯತೆಯ ಕಾರ್ಯ ನೋಡಿ ಸ್ಥಳೀಯ ಶಬ್ಬಾಷ್ ಅಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *