1,200 ವಲಸಿಗರನ್ನ ಹೊತ್ತು ಪ್ರಯಾಣ ಆರಂಭಿಸಿದ ರೈಲು

Public TV
1 Min Read

ಹೈದರಾಬಾದ್: ವಿಶೇಷ ರೈಲು 1,200 ವಲಸಿಗರನ್ನು ಹೊತ್ತು ತೆಲಂಗಾಣದಿಂದ ಪ್ರಯಾಣ ಆರಂಭಿಸಿದೆ.

ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಸೇರಿದಂತೆ ಅನೇಕರು ವಿವಿಧ ನಗರಗಳಲ್ಲಿ ಸಿಲುಕಿದ್ದರು. ಅವರ ಸಂಚಾರಕ್ಕೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ತೆಲಂಗಾಣದಿಂದ ಜಾರ್ಖಂಡ್‍ಗೆ ವಲಸಿಗರನ್ನು ಹೊತ್ತು ರೈಲು ಶುಕ್ರವಾರ ಪ್ರಯಾಣ ಬೆಳೆಸಿದೆ.

ಸುಮಾರು 1,200 ವಲಸಿಗರನ್ನು ಕರೆದೊಯ್ಯುವ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್‍ನ ಹತಿಯಾಗೆ ಹೊರಟಿದೆ. ಬೆಳಗ್ಗೆ 4:50ಕ್ಕೆ ರೈಲು ಪ್ರಯಾಣ ಆರಂಭಿಸಿದೆ. ಈ ರೈಲು 24 ಬೋಗಿಗಳನ್ನು ಹೊಂದಿದ್ದು, ಇದೂವರೆಗೆ ವಲಸಿಗರನ್ನು ಕರೆದೊಯ್ಯಲು ನಿಯೋಜಿಸಿದ ಏಕೈಕ ರೈಲು ಇದಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ  ಮಹಾನಿರ್ದೇಶಕರು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರದ ಕೋರಿಕೆ ಮತ್ತು ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ ಹೈದರಾಬಾದ್‍ನ ಲಿಂಗಂಪಳ್ಳಿಯಿಂದ ಜಾರ್ಖಂಡ್‍ನ ಹತಿಯಾಗೆ ವಿಶೇಷ ರೈಲು ಓಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *