ಹಾಸನದಲ್ಲಿ ನವಜೋಡಿಯಿಂದ ಜನತಾ ಕರ್ಫ್ಯೂಗೆ ಜೈ

Public TV
1 Min Read

ಹಾಸನ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಇಂದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿ ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಹಾಸನದಲ್ಲಿ ನಿಗದಿಯಂತೆ ಮದುವೆಗಳು ನಡೆಯುತ್ತಿದ್ದರು ಕೂಡ ನೂರಕ್ಕಿಂತ ಕಡಿಮೆ ಜನರನ್ನು ಸೇರಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ನವಜೋಡಿ ಭೂಮೇಶ್ ಮತ್ತು ಹರಿಣಾಕ್ಷಿ ಎಂಬವರು, ಮದುವೆ ಮೊದಲೇ ನಿಗದಿಯಾಗಿದ್ದರಿಂದ ಇಂದು ಮದುವೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಆರೋಗ್ಯದ ದೃಷ್ಟಿಯಿಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅವರಿಗೆ ಬೆಂಬಲ ಸೂಚಿಸಲು ತೀರ ಹತ್ತಿರದ ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದೇವೆ. ಹೀಗಾಗಿ ಸಾವಿರಾರು ಜನ ಸೇರುವ ಕಡೆ ಕೇವಲ ನೂರಕ್ಕೂ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮ ಮದುವೆಯಾಗುತ್ತಿದೆ ಎಂದು ಹೇಳೀದ್ದಾರೆ.

ಇನ್ನೂ ಕೆಲವು ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಎಂಟು ಗಂಟೆಯೊಳಗೆ ಮದುವೆ ಮುಗಿಸಿ ಮೋದಿಗೆ ಮನವಿಗೆ ಜೈ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *