ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣಬಿಟ್ಟ ದಂಪತಿ

Public TV
1 Min Read

ಗಾಂಧಿನಗರ: ದಂಪತಿಗಳಿಬ್ಬರು ತಮ್ಮ ಎರಡು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣ ಬಿಟ್ಟ ಘಟನೆ ಗಾಂಧಿನಗರದಲ್ಲಿ ನಡೆದಿದೆ.

ಶನಿವಾರ ಗಾಂಧಿನಗರ ಜಿಲ್ಲೆಯ ಅದಾಲಜ್ ತಾಲೂಕಿನ ಜಾಮಿಯತ್ ಪುರ್ ಹಳ್ಳಿಯ ಪಕ್ಕದಲ್ಲಿನ ಕೆನಾಲ್ ವೊಂದಕ್ಕೆ ಮಧ್ಯರಾತ್ರಿ ದಂಪತಿ ತಮ್ಮೆರಡು ಮಕ್ಕಳೊಂದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಮೃತ ದೇಹಗಳನ್ನು ರವಿವಾರ ಬೆಳಿಗ್ಗೆ ಹೊರತೆಗೆಯಲಾಗಿದೆ ಎಂದು ಅದಾಲಜ್ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರು ಅಹಮದಾಬಾದಿನ ಲಪ್ಕಮನ್ ಹಳ್ಳಿಗೆ ಸೇರಿದವರು. ಮೃತ ಮಕ್ಕಳಲ್ಲಿ ಒಂದು ಮಗುವಿಗೆ 7 ವರ್ಷ ಎಂದು ಗುರುತಿಸಲಾಗಿದೆ. ಇನ್ನೊಂದು ಮಗುವಿನ ವಯಸ್ಸನ್ನು ಗುತಿಸಲಾಗಿಲ್ಲ. ಮೃತರು ಯಾರು ಎನ್ನುವ ಕುರಿತು ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಈ ಕುರಿತಂತೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *