ಸೊಸೆಯ ನಿರ್ಲಕ್ಷ್ಯದಿಂದ ಮೈಸೂರು ಬೋಂಡಾ ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

Public TV
1 Min Read

– ಮದ್ವೆಯಾದ ವರ್ಷದೊಳಗೆ ದಂಪತಿ ಸಾವು

ಚೆನ್ನೈ: ಕೀಟನಾಶಕ ಮಿಕ್ಸ್ ಆಗಿದ್ದ ಮೈಸೂರು ಬೋಂಡಾ ಸೇವಿಸಿ ಮದುವೆಯಾದ ಒಂದು ವರ್ಷದೊಳಗೆ ಜೋಡಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ರಾಣಿಪೇಟಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಎಸ್‍ಆರ್ ಕಂಡ್ರಿಗ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಕುಮಾರ್ (27) ಮತ್ತು ಭಾರತಿ (22) ಮೃತ ದಂಪತಿ. ಮನೆಯಲ್ಲಿ ಶಿವಕುಮಾರ್ ತಂದೆ ಪೆರಿಯಸ್ವಾಮಿ ತಮ್ಮ ತೋಟಕ್ಕಾಗಿ ಕೀಟನಾಶ ಸಿಂಪಡಿಸಲು ಕೀಟನಾಶಕ ಖರೀದಿ ಮಾಡಿ ಮನೆಗೆ ತಂದಿದ್ದರು. ಇದೇ ವೇಳೆ ಮನೆಯಲ್ಲಿ ಮೈಸೂರು ಬೋಂಡಾ ಮಾಡಲು ಮೈದಾ ಹಿಟ್ಟನ್ನು ಖರೀದಿ ಮಾಡಿದ್ದರು.

ಮನೆಗೆ ಬಂದ ಪೆರಿಯಸ್ವಾಮಿ ವಸ್ತುಗಳನ್ನು ತೆಗೆದಿಡುವಂತೆ ಸೊಸೆ ಭಾರತಿಗೆ ಹೇಳಿದ್ದರು. ಆದರೆ ಭಾರತಿ ನಿರ್ಲಕ್ಷ್ಯದಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುವ ವೇಳೆ ಕೀಟನಾಶಕ ಮೈದಾ ಹಿಟ್ಟಿನಲ್ಲಿ ಮಿಕ್ಸ್ ಆಗಿದೆ. ಆ ದಿನ ಮನೆಯಲ್ಲಿ ಅದೇ ಹಿಟ್ಟನ್ನು ಬಳಸಿ ಬೋಡಾ ಮಾಡಿದ್ದು, ಅದನ್ನು ನಾಲ್ವರು ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ನಾಲ್ವರು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ಕೂಡಲೇ ಸ್ಥಳೀಯರು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಶಿವಕುಮಾರ್ ಮತ್ತು ಭಾರತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾರತಿ ಮತ್ತು ಶಿವಕುಮಾರ್ ಮೃತಪಟ್ಟಿದ್ದಾರೆ. ಇನ್ನೂ ಪೆರಿಯಸ್ವಾಮಿ ಮತ್ತು ಲಕ್ಷ್ಮಿಯ ಪರಿಸ್ಥಿತಿ ಗಂಭೀರವಾಗಿದೆ.

ಈ ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವಕುಮಾರ್ ಮತ್ತು ಭಾರತಿ ಮದುವೆಯಾಗಿ ಒಂದು ವರ್ಷದೊಳಗೆ ಮೃತಪಟ್ಟಿರುವುದರಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *