ಮದುವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆ ಶರಣಾದ ನವದಂಪತಿ

Public TV
1 Min Read

ದಾವಣಗೆರೆ: ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದಲ್ಲಿ ನಡೆದಿದೆ.

ನಟರಾಜ್(40) ಮತ್ತು ಪಲ್ಲವಿ (24) ಆತ್ನಹತ್ಯೆಗೆ ಶರಣಾದ ದಂಪತಿ. ಈ ಇಬ್ಬರೂ ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ನಟರಾಜ್‍ಗೆ ಮೊದಲ ಪತ್ನಿ ತೀರಿ ಹೋಗಿದ್ದು 15 ವರ್ಷದ ಮಗ ಕೂಡ ಇದ್ದನು. ಹೀಗಾಗಿ ಪಲ್ಲವಿ ಪೋಷಕರು ಎರಡನೇ ಮದುವೆಯಾಗಿದ್ದಕ್ಕೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಯುವತಿಯ ಪೋಷಕರ ಕಿರುಕುಳಕ್ಕೆ ಬೇಸತ್ತು ನವದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ತಂದೆ ನಟರಾಜ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ನೋಡಿ ಮನನೊಂದ ಮಗ ಪ್ರದೀಪ್ ಕೂಡ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಈ ಸಂಬಂಧ ದಾವಣಗೆರೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *