ಬೀದರ್: ವಸತಿ ಯೋಜನೆಯ ಭ್ರಷ್ಟಾಚಾರದಲ್ಲಿ ಯಾರೇ ಇದ್ರು ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೀದರ್ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.
ಯೋಗ ದಿನದ ಸಲುವಾಗಿ ಐತಿಹಾಸಿಕ ಬೀದರ್ ಕೋಟೆಯಲ್ಲಿ (Bidar Port) ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ಪಕ್ಷ ಭ್ರಷ್ಟಾಚಾರ ರಹಿತವಾದ ಪಕ್ಷವಾಗಿದ್ದು, ನಮ್ಮಲ್ಲಿ ಝೀರೋ ಭ್ರಷ್ಟಾಚಾರವಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ
ವಸತಿ ಯೋಜನೆಯಲ್ಲಿ ಮಧ್ಯವರ್ತಿಗಳಾಗಲಿ, ದಲ್ಲಾಳಿಗಳಾಗಲಿ ಭ್ರಷ್ಟಾಚಾರ ಮಾಡಿದ ಪುರಾವೆಗಳು ಇದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸುಳ್ಳು ಹೇಳೋದೇ ಬಿಜೆಪಿಯ ಚಾಳಿಯಾಗಿದ್ದು, ಇದರಿಂದ ಏನು ಆಗಲ್ಲ. ನಮ್ಮ ಜನಪ್ರಿಯತೆಯಿಂದ ಬಿಜೆಪಿ ಕಂಗಾಲಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಆರ್ಎಸ್ ಡ್ಯಾಂ – 118.60 ಅಡಿ ನೀರು ಭರ್ತಿ
ಧಾನ್ಯ, ಪ್ರಾಣಾಯಾಮ, ಯೋಗ ಮಾಡೋದ್ರಿಂದ ಏಕಾಗ್ರತೆ ಬೆಳೆಯುತ್ತದೆ. ಯೋಗ ಒಂದು ದಿನದ ಕಾರ್ಯಕ್ರಮವಾಗಬಾರದು. ಜನರು ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು. ನಾನು ಪ್ರತಿನಿತ್ಯ ಯೋಗಾಭ್ಯಾಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ
ಇನ್ನೂ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಈ ಹಿಂದೆಯೇ 612 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದ್ದು, ಸಚಿವ ಸಂಪುಟದಲ್ಲಿ ಅದನ್ನು 740 ಕೋಟಿ ರೂ.ಗೆ ಪರಿಷ್ಕೃತ ಅನುದಾನ ಏರಿಸಲಾಗಿದೆ. ಇದಕ್ಕಾಗಿ ಅವರು ಸಿಎಂ ಹಾಗೂ ಕಂದಾಯ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.