ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪಂಚ ಸಲಹೆ

Public TV
1 Min Read

ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ.

ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ:
ಸಲಹೆ 1: 20 ಸಾವಿರ ಕೋಟಿಗಳ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸಿ. (900ರಿಂದ 1200 ಸಂಸದರ ಆಸನದ ಸಾಮಥ್ರ್ಯದ ಹೊಸ ಸಂಸತ್ ಭವನ ನಿರ್ಮಾಣ. ಎಲ್ಲಾ ಇಲಾಖೆಗಳಿಗೆ ಸಾಮಾನ್ಯ ಸಚಿವಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್‍ವರೆಗೆ 3 ಕಿ.ಮೀ. ದೂರದ ರಾಜಪಥ ನಿರ್ಮಿಸುವ ಯೋಜನೆ. 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆಗಸ್ಟ್ 2022ರ ವೇಳೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ.)

ಸಲಹೆ 2: ಬಜೆಟ್‍ನಲ್ಲಿ ಘೋಷಿಸಿರೋ ಖರ್ಚನ್ನು ಶೇಕಡಾ 30ರಷ್ಟು ಅನುಪಾತದಲ್ಲಿ ಕಡಿತಗೊಳಿಸಿ. (ಸಂಬಳ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ – ಇದನ್ನು ವಲಸಿಗರಿಗರು, ಅಸಂಘಟಿತ ವರ್ಗದ ಅನುಕೂಲಕ್ಕೆ ಬಳಸಿ.)

ಸಲಹೆ 3: ಕೇಂದ್ರ, ರಾಜ್ಯ ಸರ್ಕಾರಗಳ ಎಲ್ಲಾ ವಿದೇಶಿ ಪ್ರವಾಸಕ್ಕೆ ಬ್ರೇಕ್ ಹಾಕಿ. (ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಅಧಿಕಾರಿಗಳದ್ದು… ಕಳೆದ 5 ವರ್ಷದಲ್ಲಿ ಪಿಎಂ, ಸಚಿವರ ಪ್ರವಾಸಕ್ಕೆ 393 ಕೋಟಿ ಖರ್ಚಾಗಿದೆ.)

ಸಲಹೆ 4: ಕೊರೊನಾ ಹೊರತುಪಡಿಸಿದ ಜಾಹೀರಾತಿಗೆ 2 ವರ್ಷ ನಿಯಂತ್ರಣ ಇರಲಿ (ಟಿವಿ, ಪ್ರಿಂಟ್ ಮತ್ತು ಆನ್‍ಲೈನ್ ಮೇಲೆ ಸಂಪೂರ್ಣ ನಿಷೇಧ ಹೇರಿ)

ಸಲಹೆ 5: ಪಿಎಂ ಕೇರ್ಸ್‍ಗೆ ಬರ್ತಿರೋ ಹಣವನ್ನು `ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ’ಗೆ ವರ್ಗಾಯಿಸಿ. (ಹಣಕಾಸು ಹಂಚಿಕೆಗೆ ಎರಡು ಪ್ರತ್ಯೇಕ ವ್ಯವಸ್ಥೆ ಬೇಡ. ದಕ್ಷತೆ, ಪಾರದರ್ಶಕತೆಗೆ ನಿಧಿ ಸಾಕು. ಪ್ರಧಾನಿ ಪರಿಹಾರದಲ್ಲಿ ಈಗಾಗಲೇ 3,800 ಕೋಟಿ ಇದೆ ಅದನ್ನು ಬಳಸಿ. ಕೊರೋನಾ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.)

Share This Article
Leave a Comment

Leave a Reply

Your email address will not be published. Required fields are marked *