ಕೊರೊನಾ ವೈರಸ್ ಎಫೆಕ್ಟ್- ನಾಟಿ ಔಷಧ ತಾತ್ಕಾಲಿಕ ಸ್ಥಗಿತ

Public TV
1 Min Read

– ರಸ್ತೆ ಸಂಚಾರ ಬಂದ್ ಮಾಡಿದ ಗ್ರಾಮಸ್ಥರು
– ಔಷಧಿ ಪಡೆಯಲು ಗ್ರಾಮಕ್ಕೆ ಬರುತ್ತಿರುವ ಜನರು

ಶಿವಮೊಗ್ಗ: ಕೊರೊನಾ ಎಫೆಕ್ಟ್ ನಾಟಿ ಔಷಧದ ಮೇಲೂ ಆಗಿದ್ದು, ಜಿಲ್ಲೆಯ ಹೊಸನಗರ ತಾಲೂಕಿನ ನರಸೀಪುರದಲ್ಲಿ ನಾಟಿ ವೈದ್ಯರು ವಿತರಿಸುತ್ತಿದ್ದ ಔಷಧಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಇಲ್ಲಿ ಕ್ಯಾನ್ಸರ್, ಕಿಡ್ನಿ, ಚರ್ಮರೋಗ ಸೇರಿದಂತೆ ಇತರೆ ಕಾಯಿಲೆಗಳಿಗೆ ಕಳೆದ ಹಲವು ವರ್ಷಗಳಿಂದ ಔಷಧಿ ವಿತರಿಸಲಾಗುತ್ತಿದೆ. ನಾಟಿ ಔಷಧಿ ಪಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಹೊರ ರಾಜ್ಯಗಳ ಜನ ಸಹ ಔಷಧಿಗಾಗಿ ಇಲ್ಲಿಗೆ ಆಗಮಿಸುತ್ತಾರೆ.

ಆದರೆ ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇದೀಗ ಔಷಧಿ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಸಹ ಔಷಧಿ ಪಡೆಯಲು ವಿವಿಧ ಕಡೆಗಳಿಂದ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈಗಾಗಿ ಗ್ರಾಮಸ್ಥರು ಗ್ರಾಮಗಳಿಗೆ ಬರುವ ಜನರಿಗೆ ರಸ್ತೆಗೆ ಅಡ್ಡ ಹಾಕಿ ತಡೆಯೊಡ್ಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *