ನಗರಸಭೆಯಿಂದ ನಿರಾಶ್ರಿತರಿಗೆ ಹೇರ್ ಕಟಿಂಗ್, ಹೊಸಬಟ್ಟೆ

Public TV
1 Min Read

ಚಾಮರಾಜನಗರ: ಕೊರೊನಾ ವೈರಸ್ ಭೀತಿಗೆ ಜನರೆಲ್ಲ ಮನೆ ಸೇರಿದ್ದಾರೆ. ಆದರೆ ನಿರ್ಗತಿಕರು ಮಾತ್ರ ಸೂರಿಲ್ಲದೆ ಬೀದಿಯಲ್ಲೇ ಪರದಾಡುವಂತಾಗಿದೆ. ಇಂಥವರಿಗೆ ಆಶ್ರಯ ನೀಡಲು ಚಾಮರಾಜನಗರ ನಗರಸಭೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲೆಯಲ್ಲಿರುವ ನಿರ್ಗತಿಕರಿಗೆ ಆಹಾರ, ಬಟ್ಟೆ ನೀಡಿ ಕ್ಷೇಮವಾಗಿ ನೋಡಿಕೊಳ್ಳುತ್ತಿದೆ.

ನಗರಸಭೆ ವತಿಯಿಂದ ನಗರದ ಸಿಡಿಎಸ್ ಭವನದಲ್ಲಿ ತೆರೆದಿರುವ ನಿರಾಶ್ರಿತರ ತಾತ್ಕಾಲಿಕ ಕೇಂದ್ರದಲ್ಲಿ ಇಬ್ಬರು ಮಾನಸಿಕ ಅಸ್ವಸ್ಥರು ಸೇರಿದಂತೆ ಐವರು ನಿರಾಶ್ರಿತರಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆಗಳನ್ನು ನೀಡಲಾಗಿದೆ. ಕೊರೊನಾ ಹರಡುವಿಕೆ ಕಡಿಮೆಯಾಗುವರೆಗೂ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ.

ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಊಟಕ್ಕೆ ಪರದಾಡುತ್ತಿದ್ದ ಇವರಿಗೆ ಆಹಾರ-ವಸತಿ ಸೌಕರ್ಯ ಕಲ್ಪಿಸಲಾಗಿದೆ. ಜೊತೆಗೆ, 14 ಮಂದಿ ರಾಜಸ್ಥಾನದ ಪಾನಿಪೂರಿ ವ್ಯಾಪಾರಿಗಳಿಗೂ ಊಟದ ವ್ಯವಸ್ಥೆ ಮಾಡಿದ್ದು, ಕೊರೊನಾ ಆತಂಕ ಮುಗಿಯುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಜಣ್ಣ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *