ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!

Public TV
1 Min Read

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾಡಿದ ಟ್ವೀಟ್‍ಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಉಲ್ಲೇಖಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

‘ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾದರು.. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು..!!’ ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಆದ್ರೆ ಟ್ವೀಟಿಗರು ಮಾತ್ರ ಪ್ರತಾಪ್ ಸಿಂಹ ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಂಸದರ ಈ ಟ್ವೀಟ್ ಗೆ ನೂರಾರು ಜನರು ಟ್ವಿಟ್ಟರ್ ನಲ್ಲೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನಿಮ್ಮ ತಕಾರಾರು ಕ್ಯಾಂಟೀನ್ ಗೋ ಇಂದಿರಾ ಹೆಸರಿಗೋ? ನಿಮಗೆ ಹಸಿವಿನ ಬೆಲೆ ಗೊತ್ತಿಲ್ಲಾ ಎಂದು ಜನರು ಸಂಸದರನ್ನು ಟ್ವಿಟ್ಟರ್ ನಲ್ಲೇ ತರಾಟೆಗೆ ತೆಗೆದುಕೂಂಡಿದ್ದಾರೆ. ನಿಮ್ಮವರು ಬಿಜೆಪಿ ಮೋದಿ ಹೆಸರು ವೈಭವೀಕರಿಸಬಹುದು. ಆದರೆ ಕಾಂಗ್ರೆಸ್ ಇಂದಿರಾ ಹೆಸರು ಬಳಸುವಂತಿಲ್ಲವೇ? ಈ ಟ್ವೀಟ್ ನಿಮ್ಮ ಮನಸ್ಥಿತಿ ಹೇಗಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

https://twitter.com/RudreshaRDX/status/899117269996904448

https://twitter.com/mallikarjun022/status/899102738193104896

https://twitter.com/vbethechange/status/899135533195984897

https://twitter.com/SIKANDAR9585778/status/899164119823073281

 

Share This Article
Leave a Comment

Leave a Reply

Your email address will not be published. Required fields are marked *