ಪ್ರೀತ್ಸಿ ತಲೆಮರೆಸಿಕೊಂಡ ಪೇದೆಯನ್ನು ಪೊಲೀಸರೇ ಹಿಡಿದು ಯುವತಿಯೊಂದಿಗೆ ಮದ್ವೆ ಮಾಡಿಸಿದ್ರು

Public TV
1 Min Read

ದಾವಣಗೆರೆ: ಯುವತಿಯನ್ನು ಪ್ರೀತಿಸಿ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಯುವಕನನ್ನು ಪೊಲೀಸರು ಹಿಡಿದು ಮದುವೆ ಮಾಡಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.

ಹರಪ್ಪನಹಳ್ಳಿ ತಾಲೂಕಿನ ನಿವಾಸಿಗಳಾದ ಮಂಜುನಾಥ್ ಹಾಗೂ ಮಂಜುಳ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಕಳೆದ ಕೆಲ ತಿಂಗಳುಗಳಿಂದ ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಕ್ಕೆ ನಿರಾಕರಿಸಿದ್ದನು.

ಇದರಿಂದ ನೊಂದ ಯುವತಿ ಮಂಜುಳ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು. ಮಂಜುಳಾಳ ಕಾಟ ತಡೆಯಲಾಗದೆ ಪೊಲೀಸ್ ಪೇದೆ ಮಂಜುನಾಥ್ ತಲೆಮರೆಸಿಕೊಂಡಿದ್ದನು. ಇದರಿಂದ ಯುವತಿಯ ಪೋಷಕರು ಹಾಗು ಏಕತಾ ವೇದಿಕೆಯ ಕಾರ್ಯಕರ್ತರು ಸೇರಿ ಪೇದೆ ಮಂಜುನಾಥ್ ನನ್ನು ಹಿಡಿದು ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ಇಬ್ಬರಿಗೆ ಮದುವೆ ಮಾಡಿಸಿದ್ದಾರೆ.

ಪೊಲೀಸ್ ಪೇದೆ ಮಂಜುನಾಥ್ ವಿರುದ್ಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಜುಳ ದೂರು ದಾಖಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *