ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

Public TV
1 Min Read

ಪಾಟ್ನಾ: ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಅವರ ಭದ್ರತಾ ಸಿಬ್ಬಂದಿ ಮಾಧ್ಯಮದ ಕ್ಯಾಮೆರಾಮನ್ ಹಲ್ಲೆ ನಡೆಸುವ ಮೂಲಕ ಗೂಂಡಾ ವರ್ತನೆಯನ್ನು ತೋರಿದ್ದಾರೆ.

ಮಾಜಿ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಎಲೆಕ್ಟ್ರಿಕ್ ರಿಕ್ಷಾ ಮೂಲಕ ಮತ ಚಲಾಯಿಸಿ ಹೊರಟಿದ್ದರು. ಈ ವೇಳೆ ಕ್ಯಾಮೆರಾಮನ್ ರಂಜನ್ ಎಂಬವರ ಕಾಲಿಗೆ ರಿಕ್ಷಾದ ಗಾಲಿ ತಾಗಿದೆ. ಈ ವೇಳೆ ರಿಕ್ಷಾ ಚಾಲಕನಿಗೆ ಸ್ವಲ್ಪ ಹಿಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯಾದವ್ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಬಳಿಕ ಮಾತನಾಡಿದ ತೇಜ್ ಪ್ರತಾಪ್ ಯಾದವ್, ಮಾಧ್ಯಮದವರ ಮೇಲೆ ಆಕ್ರೋಶ ಹೊರಹಾಕಿದರು. ನನ್ನ ಭದ್ರತಾ ಸಿಬ್ಬಂದಿ ಯಾವುದೇ ತಪ್ಪು ಮಾಡಿಲ್ಲ. ಮತ ಹಾಕಿ ಬಂದಾಗ ಎಲ್ಲ ಫೋಟೋಗ್ರಾಫರ್ ಗಳು ನನ್ನ ಕಾರ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿತೊಡಗಿದರು. ಹೀಗಾಗಿ ನನ್ನ ಕಾರಿನ ಗ್ಲಾಸ್ ಸಹ ಒಡೆದಿದೆ. ನನ್ನ ಕೊಲೆಗೆ ಕೆಲವರು ಸಂಚು ರೂಪಿಸುತ್ತಿದ್ದಾರೆ. ಈ ಗಲಾಟೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.

Share This Article
Leave a Comment

Leave a Reply

Your email address will not be published. Required fields are marked *