ತುಮಕೂರು: ಸಿಎಂ ಕಾರ್ಯಕ್ರಮದಲ್ಲಿ ಮದ್ಯದ ಹೊಳೆ

Public TV
1 Min Read

ತುಮಕೂರು: ಮಧುಗಿರಿ ತಾಲೂಕಿನ ಕೊಡಗೇನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರು ಅಕ್ಷರಶಃ ಎಣ್ಣೆ ಕುಡಿದು ತೂರಾಡಿದ ಘಟನೆ ನಡೆದಿದೆ.

ಅತ್ತ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಟಿಬಿ ಜಯಚಂದ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ರೆ, ಇತ್ತ ಕಾರ್ಯಕರ್ತರು ವೇದಿಕೆಯ ಹಿಂಭಾಗದಲ್ಲಿ ಎಣ್ಣೆ ಕುಡಿದು ತೂರಾಡುತ್ತಿದ್ದರು. ಒಂದು ಗುಂಪು ಎಣ್ಣೆ ಕುಡಿಯುತ್ತಿದ್ರೆ ಇನ್ನೊಂದು ಗುಂಪು ಮದ್ಯದ ಬಾಟಲಿ ಸರಬರಾಜು ಮಾಡುತ್ತಿತ್ತು.

ಶಾಸಕ ಕೆ.ಎನ್ ರಾಜಣ್ಣ ಜನರನ್ನು ತಾಲೂಕಿನ ಮೂಲೆ ಮೂಲೆಯಿಂದ ಹಣ ಮತ್ತು ಹೆಂಡದ ಆಸೆ ತೋರಿಸಿ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಫುಲ್ ಬಾಟಲ್ ಎಣ್ಣೆ, ಕೈ ತುಂಬ ದುಡ್ಡು ಪಡೆದ ಬಾಡಿಗೆ ಕಾರ್ಯಕರ್ತರು ಅಮಲಿನಲ್ಲಿ ತೇಲಾಡಿ ವಾಪಸ್ಸಾಗಿದ್ದಾರೆ.

ಶಾಸಕ ಕೆ.ಎನ್ ರಾಜಣ್ಣ ಮುಂದಿನ ಚುನಾವಣೆಗೆ ಈಗಿನಿಂದಲೇ ಒಬ್ಬರಿಗೆ 1 ಬಾಟಲ್ ಎಣ್ಣೆ, 500 ರೂ. ಹಣ ಹಂಚುವ ಮೂಲಕ ತಯಾರಿ ನಡೆಸುತ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *