ಬೆಳಗಾವಿ: ಕರಾವಳಿ (Karavalli), ಮಲೆನಾಡು ಭಾಗದಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ನೆಲೆ ಇಲ್ಲ. ಈಗ ಕರಾವಳಿ ಭಾಗದಲ್ಲಿ 33 ಕ್ಷೇತ್ರದಲ್ಲಿ 28 ಸೀಟ್ ಬಿಜೆಪಿ (BJP) ಪಕ್ಷದೊಂದಿಗಿದ್ದು ಮುಂದಿನ ಬಾರಿ ಚುನಾವಣೆಯಲ್ಲಿ 33 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ (Dr. Ashwathnarayan) ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕರಾವಳಿ, ಮಲೆನಾಡು ಭಾಗಕ್ಕೆ 2,500 ಕೋಟಿ ರೂ. ನೀಡುತ್ತೇವೆ. ಎಂಬ ಕಾಂಗ್ರೆಸ್ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರಾವಳಿ, ಮಲೆನಾಡಿನಲ್ಲಿ ಇವರು ಏನ್ ಹೇಳಿದ್ರೂ ನಂಬಲ್ಲ. ಇವರು ಅಲ್ಲಿ ಕಂಪ್ಲೀಟ್ ರಿಜೆಕ್ಟ್ ಆಗಿದ್ದಾರೆ. ಅಲ್ಲಿ ನಾಯಕರು ಇಲ್ಲ. ಇವರ ಬಾವುಟ ಹಿಡಿಯಲು ಕಾರ್ಯಕರ್ತರು ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸರ್ವಿಸ್ ಅಗೇನೆಸ್ಟ್ ಪೇಮೆಂಟ್, ಮೆನು ಕಾರ್ಡ್ ಹಿಡಿದುಕೊಂಡು ಡಿಕೆಶಿ ಓಡಾಡುತ್ತಾರೆ: ಅಶ್ವಥ್ ನಾರಾಯಣ್
ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಾಶ್ಔಟ್ ಆಗಿದೆ. ಅಲ್ಲಿ ಪಾಪ ಅವರ ಧ್ವನಿ ಕೇಳೋರು ಇಲ್ಲ. ಪ್ರಜಾ ಯಾತ್ರೆಯೂ ಇಲ್ಲ ಪ್ರಜಾಧ್ವನಿಯೂ ಇಲ್ಲ. ಅಲ್ಲಿ ಕಾಂಗ್ರೆಸ್ಗೆ ಅಡ್ರೆಸ್ ಇಲ್ಲ. 33 ಕ್ಷೇತ್ರದಲ್ಲಿ 28 ಸೀಟ್ ಬಿಜೆಪಿ ಕೈಯಲ್ಲಿದೆ. ಈ ಬಾರಿ 33 ಕ್ಷೇತ್ರ ಬಿಜೆಪಿ ಗೆಲ್ಲುತ್ತೆ ಈ ಮೂಲಕ ಕಾಂಗ್ರೆಸ್ ಮುಕ್ತವಾಗುತ್ತೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್ ಜಾಗ: ಸಿಟಿ ರವಿ ವ್ಯಂಗ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k