ನಾಗೇಂದ್ರ ನಮ್ಮ ಹೀರೋ, ಬಿಜೆಪಿಗೆ ಮತ್ತೆ ಬರ್ತಾರೆ: ಈಶ್ವರಪ್ಪ

Public TV
1 Min Read

ಬಳ್ಳಾರಿ: ಕಾಂಗ್ರೆಸ್ ಶಾಸಕ ನಮ್ಮ ಹೀರೋ. ಅವರು ಮತ್ತೆ ಬಿಜೆಪಿಗೆ ಬರುತ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಘನತ್ಯಾಜ್ಯ ಸಂಗ್ರಹಣಾ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.

ವೇದಿಕೆಯಲ್ಲಿರುವ ಕಾಂಗ್ರಸ್ ಶಾಸಕ ನಾಗೇಂದ್ರ ಅವರು ನಮ್ಮ ಹೀರೋ, ಯಾಕೆ ಸಂಕೋಚ ಅವರು ನಮ್ಮ ಹೀರೋನೇ. ನಾಗೇಂದ್ರಗೆ ಒಂದು ಸಾರಿ ಎಲ್ಲರೂ ಚಪ್ಪಾಳೆ ಹೊಡಿಯಿರಿ. ಮೊದಲು ನಾಗೇಂದ್ರ ಅವರು ನಮ್ಮ ಜೊತೆ ಇದ್ದರು. ಇದೀಗ ಬೇರೆ ಕಡೆ ಇದ್ದಾರೆ. ಆದಷ್ಟು ಬೇಗ ಕರೆಸಿಕೊಳ್ತೀವಿ ಎಂದರು.

ಈ ಹಿಂದೆ ನಡೆದ ಬಿಜೆಪಿ ಆಪರೇಷನ್ ಕಮಲದಲ್ಲಿ ನಾಗೇಂದ್ರ ಅವರ ಹೆಸರು ಕೇಳಿ ಬಂದಿತ್ತು, ನಾಗೇಂದ್ರ ಅವರೇ ಬಿಜೆಪಿ ಮೊದಲು ಹೋಗುತ್ತಾರೆ ಎನ್ನುವ ಅನುಮಾನ ಮೂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಸಚಿವ ಈಶ್ವರಪ್ಪ ಅವರು, ನಾಗೇಂದ್ರ ಸದ್ಯ ಕಾಂಗ್ರೆಸ್ ನಲ್ಲಿ ಇದ್ದಾರೆ. ಮುಂದೆ ನಮ್ಮ ಬಿಜೆಪಿಗೆ ಬರುತ್ತಾರೆ ಎಂದು ಹೇಳಿಕೆ ನೀಡಿ ನಾಗೇಂದ್ರ ಅವರು ಬಿಜೆಪಿಗೆ ಹೋಗುವುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ಸಿನ ನಾಗೇಂದ್ರ ಅವರು ಬಿಜೆಪಿ ಹೋಗುವುದು ಪಕ್ಕಾ ಆದಂತಿದೆ.

Share This Article
Leave a Comment

Leave a Reply

Your email address will not be published. Required fields are marked *