ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

Public TV
4 Min Read

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಂಧನ ಭಯದಿಂದ ಕಂಪ್ಲಿ ಶಾಸಕ ಗನೇಶ್ ನಾಪತ್ತೆಯಾಗಿದ್ದಾರೆ. ಆದರೆ ಅಂದು ಈಗಲ್ಟನ್ ರೆಸಾರ್ಟಿನಲ್ಲಿ ಏನೆಲ್ಲ ಘಟನೆ ನಡೆಯಿತು? ನಾನು ಹೊಡೆಯಲು ಪ್ರೇರಣೆಯಾದ ಘಟನೆ ಏನು ಎನ್ನುವುದನ್ನು ಗಣೇಶ್ ಅವರು ಎಳೆ ಎಳೆಯಾಗಿ ವಿವರಿಸಿ ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

ಈಗಲ್ಟನ್ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಅವರೊಂದಿಗೆ ಪಾರ್ಟಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಪಾರ್ಟಿ ನಡೆದ ಬಳಿಕ ಏನೆಲ್ಲಾ ಆಯ್ತು ಎನ್ನುವುದರ ಬಗ್ಗೆ ಕಂಪ್ಲಿ ಕಾಂಗ್ರೆಸ್ ಫೇಸ್ ಬುಕ್ ಪೇಜ್ ನಲ್ಲಿ ವಿವರಿಸಿ ಮಾಹಿತಿ ನೀಡಿದ್ದಾರೆ.

ಫೇಸ್‍ಬುಕ್ ಪೋಸ್ಟ್ ನಲ್ಲೇನಿದೆ?
ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನತೆಗೆ ನನ್ನ ನಮಸ್ಕಾರಗಳು. ಅಂದು ಏನು ಘಟನೆಗಳು ನಡೆದಿದ್ದವು ಅವು ಎಲ್ಲ ಸುಳ್ಳು. ಈಗಲ್ಟನ್ ರೆಸಾರ್ಟ್ ನಲ್ಲಿ ನಾನು ಹಾಗೂ ಆನಂದ್ ಸಿಂಗ್ ಪಾರ್ಟಿ ಮಾಡಿದ್ದು ನಿಜ. ಪಾರ್ಟಿ ಮಾಡಿದ ನಂತರ ಆನಂದ್ ಸಿಂಗ್ ಅವರೇ ರೂಮ್ ಗೆ ಕರೆದುಕೊಂಡು ಹೋಗಿ ರಾತ್ರಿ 11.00 ಗಂಟೆ ಇಂದ 2.30 ಗಂಟೆವರೆಗೆ ಕೂರಿಸಿಕೊಂಡು ಮಾತನಾಡಿದರು.

“ಸಾಮಾನ್ಯ ವ್ಯಕ್ತಿಯಾದ ನೀನು ಎಂಎಲ್‍ಎ ಆಗಿದ್ದು ನಾನು ಸಹಿಸುವುದಿಲ್ಲ. ನನ್ನ ಎದುರು ಕುಳಿತು ಕೊಳ್ಳುವ ಶಕ್ತಿ ನಿನಗೆ ಬಂತ ಮಗನೇ, ಕೆಳಗೆ ಕುಳಿತು ಕೊಳ್ಳುವ ಮಗನೇ” ಅಂತ ನನಗೆ ನಿಂದನೆ ಮಾಡುತ್ತಲೇ ಮಾತನಾಡಿದ್ದರು. “ಕಳೆದ ಚುನಾವಣೆಯಲ್ಲಿ ನೀನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ಹಾಗೂ ಸೋಲಲು ನಾನೇ ಕಾರಣ. 81 ರೆಹಮಾನ್ ಸಾಬ್‍ನಿಗೆ ನಿನ್ನ ಅಪ್ಪನ ಹತ್ತಿರ ಕಳುಹಿಸಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ನಾನೇ ಕಾರಣ. ಈ ರೀತಿ ನೀನು ಆರ್ಥಿಕವಾಗಿ ಕುಗ್ಗಿ ಭಿಕ್ಷೆ ಬೇಡುವ ಹಾಗೆ ಮಾಡಿದೆ. ತುಕರಾಂಗೆ ಮಿನಿಸ್ಟರ್ ಮಾಡಲು ದೆಹಲಿಗೆ ಹೋಗುತ್ತೀಯಾ ಸೂ…! ಮಗನೇ” ಎಂದು ಹೇಳಿದರು.

“ಎಂ.ಪಿ ರವೀಂದ್ರ ರವರ ಜಾಗ 2 ಕೋಟಿ ರೂ.ಗೆ ತೆಗೆದುಕೊಂಡು ಹಗರಿಬೊಮ್ಮನಹಳ್ಳಿಯಲ್ಲಿ ಆಫೀಸ್ ಮಾಡಿ ಭೀಮಾಗೆ ಸೋಲಿಸಲು ಪಣ ತೊಟ್ಟಿದೆ, ಆದರೆ ಅದು ಆಗಲಿಲ್ಲ. ಈಗ ಕಂಪ್ಲಿಯಲ್ಲಿ ಆಫೀಸ್ ತೆಗೆದು ನಿನ್ನನ್ನು ಮುಗಿಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ, ನನ್ನ ಒಂದು ಕೂದಲು ಕೀಳಲು ಅವರಿಂದ ಆಗಲಿಲ್ಲ. ಆದರು ನಾನು ಗೆದ್ದು ಬಂದೆ, ಕೀಳು ಜಾತಿ ನೀನು ಅದಕ್ಕೆ ಸೇರಿದವನು” ಎಂದು ಕೆಳಗೆ ಕೂತಿದ್ದ ನನ್ನ ಎದೆಗೆ ಜೋರಾಗಿ ಕಾಲಿನಿಂದ ಹೊಡೆದರು. ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎದೆಗೆ ನೋವು ಆಗಿದ್ದರಿಂದ ನಾನು ನಿಧಾನವಾಗಿ ರೂಮ್ ಗೆ ಹೋದೆ.

ಆನಂದ್ ಸಿಂಗ್ ಮತ್ತೆ ರೂಮಿನವರೆಗೂ ಬಂದು ಮಡಿಕೆ ಎತ್ತಿ ಹೊಡೆದು,”ನನ್ನ ರೂಮಿನ ಬಾಗಿಲು ತಟ್ಟಿ ಬಾಲೆ ಸೂ.. ಮಗನೇ ಭೀಮಾನ ರೂಂ ತೋರಿಸ ಬಾ. ಎಲ್ಲರ ಮುಂದೆ ಸೂ.. ಮಗ ಎಂದಿದ್ದಾನೆ ಅವನನ್ನು ಬಿಡಲ್ಲ” ಎಂದರು. ನನ್ನನ್ನು ಬಲವಂತವಾಗಿ ಭೀಮಾ ನಾಯ್ಕ್ ರೂಂ ಗೆ ಕರೆದುಕೊಂಡು ಹೋದರು. ಅಲ್ಲಿ,”ಲೇ ಭೀಮಾ ನೀನು ಲೇ ಸೂ… ಮಗ ಸಿಪಿಎಲ್ ಮೀಟಿಂಗ್‍ನಲ್ಲಿ ಎಲ್ಲರ ಮುಂದೆ ನನಗೆ ಸೂ.. ಮಗ ಅಂತ ಹೇಳಿದಿ, ಎಲ್ಲರ ಮುಂದೆ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳು ಮಗನೇ” ಅಂತ ಭೀಮಾ ನಾಯ್ಕ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಗ ನಾನು ಮಧ್ಯೆ ಪ್ರವೇಶಿಸಿ ಇಬ್ಬರ ನಡುವೆ ಸಾಂತ್ವನ ಮಾಡಿದೆ. ನಂತರ ಭೀಮಾನ ಕಥೆ ಮುಗಿಯಿತು. ಈಗ “ನೀನು ಲೇ ಸೂ….! ಮಗ ಗಣೇಶ” ಎಂದರು.

ನನ್ನ ಪರಿವಾರ ನನ್ನ ಹೆಂಡತಿ, ತಾಯಿ ಅಕ್ಕನ ಮೇಲೆ ಕೆಟ್ಟದಾಗಿ ಮಾತನಾಡಿದರು. ಅವಾಚ್ಯ ಶಬ್ದಗಳಿಂದ ಬೈದರು. ಜಾತಿ ನಿಂದನೆ ಮಾಡಿದರು ನನ್ನ ಶರ್ಟ್ ಹರಿದು ನನ್ನ ಬಲಗೈ ಹೆಬ್ಬೆರಳನ್ನು ತಿರುಗಿಸಿ ಫ್ಯಾಕ್ಚರ್ ಮಾಡಿ ಬೆಡ್ ಲೈಟ್ ತೆಗದು ಕೊಂಡು ನನ್ನ ಬೆನ್ನಿಗೆ ಹೊಡೆದು ಹಲ್ಲೆ ಮಾಡಿದರು. ಅವರು ನನ್ನ ಮೇಲೆ ಮೊದಲು ಕೈ ಎತ್ತಿದಕ್ಕೆ ನಾನು ಅವರ ಮೇಲೆ ಕೈ ಎತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ. ಈ ಎಲ್ಲಾ ವಿಷಯ ಎಲ್ಲಾ ಮುಖಂಡರಿಗೂ ತಿಳಿದಿದೆ. ಮುಖಂಡರು ಇಬ್ಬರ ತಪ್ಪಿದೆ. ಇಬ್ಬರೂ ಪಕ್ಷದ ಮುಜುಗರಕ್ಕೆ ಕಾರಣ ಆಗಿದ್ದೀರಿ ಎಂದು ಹೇಳಿ ಈಗಲ್ಟನ್ ರೆಸಾರ್ಟ್ ನಲ್ಲಿ ವೈದ್ಯರನ್ನು ಕರಿಸಿ ನನಗೆ ಪ್ರಥಮ ಚಿಕಿತ್ಸೆ ಮಾಡಿದರು.

ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರೆ ಆನಂದ ಸಿಂಗ್‍ಗೆ ಹೊಡೆಯ ಬೇಕು ಎಂಬ ಉದ್ದೇಶ ನನ್ನಲ್ಲಿ ಇಲ್ಲ. ಹಾಗಾದರೆ ನಾನು ಅವರ ಹತ್ತಿರ ರೂಂ ನಲ್ಲಿ 2 ರಿಂದ 3 ತಾಸು ಇದ್ದಾಗ ಮಾಡಬಹುದಾಗಿತ್ತು. ಯಾವುದೇ ಉದ್ದೇಶ ನನ್ನಲ್ಲಿ ಇಲ್ಲ. ರಾಜಕೀಯವಾಗಿ ಮುಗಿಸಲು ಆನಂದ್ ಸಿಂಗ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬದವರಿಗೆ ಆನಂದ್ ಸಿಂಗ್ ಹಾಗೂ ಸಂದೀಪ್ ಸಿಂಗ್ ರಿಂದ ಜೀವ ಬೆದರಿಕೆ ಇದೆ. ಕಂಪ್ಲಿ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಕಂಪ್ಲಿ ಕಲ್ಯಾಣವೇ ನನ್ನ ಗುರಿ ಎಂದು ಪೇಜ್ ನಲ್ಲಿ ಬರೆಯಲಾಗಿದೆ.


ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *