ನೈತಿಕ ಜವಾಬ್ದಾರಿಯಿಂದ ರಾಜೀನಾಮೆ ಕೊಟ್ಟಿದ್ದೇನೆ: ಎಸ್.ಆರ್. ಪಾಟೀಲ್ ಸ್ಪಷ್ಟನೆ

Public TV
1 Min Read

ಬೆಂಗಳೂರು: ನಾನು ನನ್ನದೇ ಆದ ತತ್ವ ಸಿದ್ದಾಂತವನ್ನು ಹೊಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದ ಸ್ಥಾನವನ್ನು ಗಳಿಸಿಲ್ಲ ಆದ್ದರಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಎಸ್.ಆರ್. ಪಾಟೀಲ್ ಹೇಳಿದ್ದಾರೆ.

ರಾಜೀನಾಮೆ ನೀಡಿದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜೀನಾಮೆ ಕೊಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ 10 ಸ್ಥಾನ ಬಂದ್ರೂ, ನಮ್ಮ ಪಕ್ಷ ನಿಶ್ಚಿತವಾಗಿ ಕಾರ್ಯ ಮಾಡುತ್ತಿತ್ತು. ನಾನು ಉತ್ತರ ಕರ್ನಾಟಕದ ಜವಬ್ದಾರಿ ಹೊತ್ತಿದ್ದೇನೆ. ಅಂದಿನ ಸೋನಿಯ ಗಾಂಧಿಯವರು ನನ್ನನ್ನು ಕರ್ನಾಟಕದ ಕಾರ್ಯಧ್ಯಕ್ಷರಾಗಿ ಅಧಿಕಾರ ಕೊಟ್ಟಿದ್ದರು ಎಂದರು.

ಉತ್ತರ ಕರ್ನಾಟಕದಲ್ಲಿ ನೀರಿಕ್ಷಿತ ಸ್ಥಾನವನ್ನು ಪಡೆಯದೆ ಇದ್ದುದ್ದರಿಂದ ನನಗೆ ನೋವಾಗಿದೆ. ನಾನು ನೈತಿಕ ಜವಬ್ದಾರಿಯಿಂದ ನಾನು ರಾಜೀನಾಮೆ ಕೊಟ್ಟಿದ್ದೇನೆ. ಬೇರೆ ಯಾವುದೇ ಕಾರಣವಿಲ್ಲ. ಯಾರ ವಿರುದ್ಧವೂ ಗರಂ ಆಗಿಲ್ಲ. ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದ ಸ್ಥಾನವನ್ನು ಗಳಿಸಿಲ್ಲ ಈ ಕಾರಣದಿಂದಲೇ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಯಾರು ನನಗೆ ಒತ್ತಡ ಹಾಕಿಲ್ಲ. ಕಾಂಗ್ರೆಸ್ ನಾಯಕರು ಯಾವುದೇ ನಿರ್ಣಯ ತೆಗೆದುಕೊಂಡರೂ ನನ್ನ ಒಪ್ಪಿಗೆ ಇದೆ. ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ಅಪಾರ ನಂಬಿಕೆ ಇದೆ. ನಾನು ಯಾವುದೇ ಅಸಮಾಧಾನ ಹೊಂದಿಲ್ಲ. ನೈತಿಕಗಿರಿಯಿಂದ ಈ ರಾಜೀನಾಮೆ ಕೊಟ್ಟಿದ್ದೇನೆ. ರಾಹುಲ್ ಗಾಂಧಿ ಏನು ತಿರ್ಮಾನ ಮಾಡುತ್ತಾರೆ ಕಾದು ನೋಡುತ್ತೇನೆ. ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆಯನ್ನು ಹೊಂದಿಲ್ಲ. ನಾನು ಸಾಯುವವರೆಗೂ ಕಾಂಗ್ರೆಸ್ಸಿನಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *