ಬೀದರ್: ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದ ಸಚಿವ ರಹೀಂಖಾನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದು ಸಚಿವ ರಹೀಂಖಾನ್ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಚಿವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದ್ದು, ಅಭಿವೃದ್ಧಿ ವಿಷಯಕ್ಕೆ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದರು. ಕೊನೆಗೆ ಕಾರ್ಯಕರ್ತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಚಿವರು ತಡವರಿಸಿದ್ದಾರೆ.
ನೀವು ಒಂದು ರೂಪಾಯಿ ಕೆಲಸವನ್ನ ನಮ್ಮ ಗಲ್ಲಿಗೆ ಮಾಡಿದ್ದೀರಾ? ನೀವು ಕಾರ್ಯಕರ್ತರಿಗೆ ಒಂದು ರೂಪಾಯಿ ಮರ್ಯಾದೆ ಕೊಟ್ರೆ ನಾವು ಕೊಡುತ್ತೀವಿ, ಮೊದಲು ನಮ್ಮ ವಾರ್ಡ್ ಗಳಲ್ಲಿ ಕಾಂಗ್ರೆಸ್ 70 ಮತಗಳನ್ನ ಕಾಂಗ್ರೆಸ್ ಪಡಿಯುತ್ತಿತ್ತು. ಆದರೆ ಈಗ 500ಕ್ಕೂ ಹೆಚ್ಚು ಮತಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ನೀವು ಮಾಡಿದ ಅಭಿವೃದ್ಧಿ ಕೆಲಸ ಏನು ಅಂತ ಕಾರ್ಯಕರ್ತನೊಬ್ಬ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.