ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಲೂಟಿಕೋರರ ಸರ್ಕಾರ. ಇದು ವ್ಯಾಪಾರಕ್ಕೆ ಕುಳಿತಿರೋ ಕಾಂಗ್ರೆಸ್ ಸಂತೆ ಸರ್ಕಾರ ಎಂದು ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಹಾಗೂ ಬಿಆರ್ ಪಾಟೀಲ್ (BR Patil) ಆರೋಪ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ನಾವು ಪದೇ ಪದೇ ಹೇಳುತ್ತಿದ್ದೆವು. ಈಗ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಹೇಳುತ್ತಿದ್ದಾರೆ. ರಾಯರೆಡ್ಡಿ ಕರ್ನಾಟಕ ನಂಬರ್ ಒನ್ ಭ್ರಷ್ಟಾಚಾರ ರಾಜ್ಯ ಎಂದು ಹೇಳಿದರು. ಈಗ ರಾಜು ಕಾಗೆ ಹೇಳಿದ್ದಾರೆ. ಸಿಎಂ ಹಾರಿಕೆ ಉತ್ತರ ಕೊಡುತ್ತಾರೆ. ಬಿ.ಆರ್ ಪಾಟೀಲ್ ವಸತಿ ಇಲಾಖೆಯಲ್ಲಿ ಅಕ್ರಮ ಅಂತ ಹೇಳಿದ್ದಾರೆ. ದುಡ್ಡು ಕೊಡದೆ ಏನು ಆಗಲ್ಲ ಎಂದು ಹೇಳಿದ್ದಾರೆ. ಸಿಎಂ ಅವರಿಗೂ ವಿವರಣೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಮಂತ್ರಿಗಳ ವಿರುದ್ಧ ಕೋಲಾರದಲ್ಲಿ ತಿರುಗಿಬಿದ್ದಿದ್ದಾರೆ. ಜಮೀರ್ ರಾಜೀನಾಮೆ ಕೊಡಿಸಿ ಎಂದು ಬೇಳೂರು ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ದೇಶಪಾಂಡೆ ಹೇಳಿದ್ದಾರೆ. ಈ ಸರ್ಕಾರಕ್ಕೆ ಏನು ಬೇಕಿದೆ. ಇದು ಲೂಟಿ ಕೋರರ ಸರ್ಕಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ
ಸಿಎಂ, ಡಿಸಿಎಂ ಸತ್ಯ ಹೇಳಿದರೆ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಹಣ ಕೊಡದೇ ಏನು ಆಗಲ್ಲ. ಇದು ವ್ಯಾಪಾರಕ್ಕೆ ಕೂತಿರುವ ಕಾಂಗ್ರೆಸ್ ಸಂತೆ ಸರ್ಕಾರ. ಇದು ವ್ಯಾಪಾರಕ್ಕೆ ಬಂದ ಸರ್ಕಾರ ಇದು. ನಮ್ಮ ಮೇಲೆ 40% ಪೇ ಸಿಎಂ ಅಂದರು, ಯೋಗ್ಯತೆಗೆ ಅದನ್ನ ಪ್ರೂವ್ ಮಾಡಿಲ್ಲ. ಸಿಎಂ, ಡಿಸಿಎಂಗೆ ನಾಚಿಕೆ ಆಗಲ್ವಾ. ಮಂತ್ರಿಗಳು ರಾಜೀನಾಮೆ ಕೊಡೋ ಬದಲು ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದರೆ ಬದಲಾವಣೆ ಕಾಣಬಹುದು. ಇವರೇ ಇದ್ದರೆ ಇವರು ಲೂಟಿ, ದರೋಡೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್ ಆರ್ಡರ್: ಬಿಆರ್ ಪಾಟೀಲ್ ಬಳಿಕ ರಾಜು ಕಾಗೆ ದಂಗೆ
ಬಿಹಾರ ಚುನಾವಣೆಗೆ ಕಪ್ಪ ಕಾಣಿಕೆ ಕೊಡಬೇಕು. ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನಿಸುತ್ತೆ. ಈ ಸರ್ಕಾರದಲ್ಲಿ ಪ್ರತಿಯೊಬ್ಬರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯಗೆ ಅವರೇ ನೀವು ಜನರಿಂದ ಛೀ ಥೂ ಅಂತ ಉಗಿಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು. ನಿತ್ಯ 2-3 ಹಗರಣ ಈ ಸರ್ಕಾರದಲ್ಲಿ ಆಗುತ್ತಿದೆ. ಇದೆಲ್ಲ ನೋಡಿದ್ರೆ ಈ ಸರ್ಕಾರದ ಆಯಸ್ಸು ಕಡಿಮೆ ಆಗುತ್ತಿದೆ ಅನ್ನಿಸುತ್ತೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್ ಆಯೋಜಕಿಗೆ ಪೋಷಕರ ತರಾಟೆ