ನಾವು ಸಿದ್ದರಾಮಯ್ಯನವರ ಅನುಚರರು, ಅವರ ನಿರ್ಧಾರಕ್ಕೆ ಬದ್ಧ: ಹೆಚ್‍ವೈ ಮೇಟಿ

Public TV
1 Min Read

ಬೆಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಮುಖ್ಯವಾದದ್ದು. ನಾವೆಲ್ಲಾ ಅವರ ಅನುಚರರು ಎಂದು ಮಾಜಿ ಸಚಿವ ಹೆಚ್‍ವೈ ಮೇಟಿ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಯಾರಿಗೆ ಟಿಕೆಟ್ ಸಿಗುತ್ತದೊ ಬಿಡುತ್ತದೋ. ನಮಗೆ ಯಾವುದೇ ಅಸಮಾಧಾನ ಬೇಸರ ಇಲ್ಲ. ಅವರ ಆಯ್ಕೆಗೆ ಬದ್ಧರಾಗಿದ್ದೇವೆ. ಅವರು ಹೇಳಿದಂತೆ ಕೇಳುತ್ತೇವೆ ಎಂದು ತಿಳಿಸಿದ್ದಾರೆ.

ಚಿಮ್ಮನಕಟ್ಟಿಯವರೇ ತಮ್ಮ ಸ್ವಕ್ಷೇತ್ರ ಬದಾಮಿಗೆ ಮುಖ್ಯಮಂತ್ರಿಗಳನ್ನು ಆಹ್ವಾನ ಮಾಡಿದ್ದಾರೆ. ಜಿಲ್ಲಾ ಮುಖಂಡರು ನಾಯಕರುಗಳು ಮುಖ್ಯಮಂತ್ರಿಗಳ ಪರ ಪ್ರಚಾರ ಮಾಡಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿಗಳು ಬರಬೇಕು ಬಂದಲ್ಲಿ ಒಳ್ಳೆಯದಾಗುತ್ತದೆ. ಬಹಳಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಬರಬೇಕು. ಜನಾಭಿಪ್ರಾಯ ಅವರ ಮೇಲೆ ಇದೆ. ನಮ್ಮ ಜಿಲ್ಲೆಯಿಂದಲೇ ಸ್ಪರ್ಧಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ನಮ್ಮ ಮಾತಿಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಮಾಜಿ ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *