ಪಾಪ ನಿಖಿಲ್ ಇನ್ನೂ ಯುವಕ, ಅವನಿಗೆ ವಿಚಾರ ಗೊತ್ತಿದ್ಯೋ, ಗೊತ್ತಿಲ್ವೋ?: ಚಲುವರಾಯಸ್ವಾಮಿ

Public TV
1 Min Read

ಮಂಡ್ಯ: `ಕಾಂಗ್ರೆಸ್ (Congress) ಕುಮಾರಣ್ಣಗೆ ನಾಲ್ಕು ಕಾಲುಗಳಿಲ್ಲದ ಕುದುರೆ ಕೊಟ್ರು’ ಎಂಬ ನಿಖಿಲ್ (Nikhil Kumaraswamy) ಹೇಳಿಕೆಗೆ ವ್ಯಂಗ್ಯವಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ (N. Chaluvaraya Swamy), `ಪಾಪ ನಿಖಿಲ್ ಇನ್ನೂ ಯುವಕ, ಅವನಿಗೆ ವಿಚಾರ ಗೊತ್ತಿದ್ಯೋ, ಗೊತ್ತಿಲ್ವೋ? ಎಂದು ಕುಟುಕಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಡಿ.ಕೋಡಿಹಳ್ಳಿಯಲ್ಲಿ ಮಾತನಾಡಿದ ಅವರು, 37 ಸೀಟು ಗೆದ್ದ ಕುಮಾರಸ್ವಾಮಿ (HD Kumaraswamy) ಅವರನ್ನ ನಾವು ಮುಖ್ಯಮಂತ್ರಿ ಮಾಡಿದ್ದೆವು. 37 ಸೀಟ್ ಗೆದ್ದರೂ ಅದೇ ಸಿಎಂ ಸೀಟು, 120 ಸೀಟ್ ಗೆದ್ದರೂ ಅದೇ ಸಿಎಂ ಸೀಟು. ಕಾಂಗ್ರೆಸ್‌ಗೆ ಬೇಕಾಗಿದ್ದು ಬಿಜೆಪಿಯನ್ನು (BJP) ದೂರವಿಡುವುದಷ್ಟೇ ಅದಕ್ಕಾಗಿ ಕುಮಾರಸ್ವಾಮಿ ಅವರನ್ನ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ

5 ವರ್ಷಗಳೂ ಕುಮಾರಸ್ವಾಮಿ ಅವರೇ ಸಿಎಂ ಆಗಿ ಇರಬಹುದಿತ್ತು, ಒಳ್ಳೆಯ ಕೆಲಸ ಮಾಡಬಹುದಿತ್ತು. ಆದರೆ ಅವರ ಪಕ್ಷದ ಅಧ್ಯಕ್ಷರೇ ಪಕ್ಷ ಬಿಟ್ಟು ಹೋದರೆ ಅದಕ್ಕಿಂತ ಇನ್ನೇನು ಹೇಳೋಕೆ ಆಗುತ್ತೆ. ಚುನಾವಣೆ ಬಂದಿದೆ ಅಂತಾ ಹೀಗೆ ಹೇಳ್ತಾರೆ. ಆದರೆ ಹೆಚ್‌ಡಿಕೆಗೆ ಕಾಂಗ್ರೆಸ್ ನಿಂದ ಯಾವುದೇ ಅಡಚಣೆ ಆಗಿರಲಿಲ್ಲ, ಅದರ ಚರ್ಚೆಗೆ ಇದು ಸಂದರ್ಭವೂ ಅಲ್ಲ ಎಂದು ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತವರು ಜಿಲ್ಲೆಯಲ್ಲೇ ಸಿದ್ದರಾಮಯ್ಯಗೆ ಭಾರೀ ಅಪಮಾನ!

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *