ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

Public TV
1 Min Read

ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರನ್ನು ಸೆಳೆಯಲು ವಿಚಿತ್ರ ವರಸೆ ಸುರು ಮಾಡಿದ್ದಾರೆ.

ನೈಸ್ ಖ್ಯಾತಿಯ ಅಶೋಕ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದ ಅಣದೂರು ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡುವ ವೇಳೆ, ಸೆಲೂನ್ ಅಂಗಡಿಯಲ್ಲಿ ಕ್ಷೌರ ಮಾಡುವ ಮೂಲಕ ಮೊತ್ತೊಮ್ಮೆ ಮತದಾರರನ್ನು ಸೆಳೆಯುವ ನಾಟಕ ಮಾಡಿದ್ದಾರೆ. ಇದನ್ನೂ ಓದಿ: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಬೆವರಿಳಿಸಿದ ಬೀದರ್ ಮತದಾರರು!

ಬಾಚಣಿಕೆ, ಕತ್ತರಿ ಹಿಡಿಯುವ ಮೂಲಕ ಸವಿತ ಸಮಾಜದ ಮತಗಳ ಬೇಟೆಗಾಗಿ ವಿಚಿತ್ರ ಗಿಮಿಕ್ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದುವೆ, ಮುಂಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರನ್ನು ಮೊತ್ತೊಮ್ಮೆ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ರೋಸಿ ಹೋಗಿರುವ ಮತದಾರ ಪ್ರಭು ಕಿಡಿ ಕಾರಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಬೀದರ್ ದಕ್ಷಿಣವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದರು. ನಂತರ ಗೆದ್ದು ಐದು ವರ್ಷ ಕಣ್ಮರೆಯಾಗಿದ್ದ ಖೇಣಿ ಈಗ ಮತ್ತೆ ಬಂದಿರುವುದರಿಂದ ಅವರ ವಿರುದ್ಧ ಕ್ಷೇತ್ರದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *