ಹಾವು ಬಂದೈತಿ ಅಂದ್ರ ಪಕ್ಕದ ಮನಿ ಗಂಡಸರನ್ನ ಕರಿ ಅಂದ್ರಂತ, ಹಂಗಾಯ್ತು ಕಾಂಗ್ರೆಸ್ ಪರಿಸ್ಥಿತಿ: ಪ್ರಹ್ಲಾದ ಜೋಶಿ

Public TV
1 Min Read

ಧಾರವಾಡ: ಮನೆಯಲ್ಲಿ ಹಾವು ಬಂದರೆ, ಹೊಡೆಯಲು ಪಕ್ಕದ ಮನೆಯ ಗಂಡಸರನ್ನು ಕರೆಯಲು ಪತ್ನಿಗೆ ಗಂಡ ಹೇಳಿದ ಹಾಗೆ ಇಂದಿನ ಕಾಂಗ್ರೆಸ್ ಪರಿಸ್ಥಿತಿ ಆಗಿದೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.

ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಬಿಜೆಪಿಯನ್ನು ಹೊಡೆಯೋಕೆ ಕಾಂಗ್ರೆಸ್‍ನವರು ಪಕ್ಕದ ಮನಿ ದೇವೇಗೌಡರನ್ನ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ರಾಹುಲ್ ಗಾಂಧಿ ಈಗ ಬೇರೆ ಬೇರೆ ಪಕ್ಷದವರನ್ನು ಸೇರಿಸುತ್ತಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಜಯಗಳಿಸಲಿದೆ. ಈಗಾಗಲೇ ನಾಮಾವಶೇಷ ಆಗಿರುವ ಕಾಂಗ್ರೆಸ್ ಪಕ್ಷವನ್ನು ಸಮಾಧಿ ಮಾಡಿ, ಅದರ ಮೇಲೆ ಅಗರಬತ್ತಿ ಹಚ್ಚುವ ಕಾರ್ಯವನ್ನು ಜೆಡಿಎಸ್ ನವರು ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಇದನ್ನು ಓದಿ: ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಮುರಿದು ಬೀಳುತ್ತದೆ. ರಾಹುಲ್ ಗಾಂಧಿಯವರೇ ದೇವೇಗೌಡರನ್ನ ಹಾಗೂ ಕುಮಾರಸ್ವಾಮಿ ಅರವನ್ನು ತಲೆಯ ಮೇಲೆ ಕೂರಸಿಕೊಳ್ಳಬಾರದು. ಅವರ ಏನು ಮಾಡಿ ಹೋಗತ್ತಾರೆ ಅಂತಾ ನಾನು ಹೇಳಲ್ಲ, ಈಗಾಗಲೇ ನಿಮ್ಮಿಂದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ಭವಿಷ್ಯ ನುಡಿದ್ರು.

Share This Article
Leave a Comment

Leave a Reply

Your email address will not be published. Required fields are marked *