ತುಮಕೂರು ಪಾಲಿಕೆಯಿಂದ ಮನೆ ದೋಖಾ- ಮಾಲೀಕನಿಗೆ ಕಾಂಗ್ರೆಸ್ ಕಾರ್ಯಕರ್ತನಿಂದ ಧಮ್ಕಿ, ಕೊಲೆಬೆದರಿಕೆ

Public TV
1 Min Read

ತುಮಕೂರು: ಇಲ್ಲಿನ ಮಹಾನಗರ ಪಾಲಿಕೆಯಿಂದ ಕುಟುಂಬವೊಂದು ಬೀದಿಗೆ ಬೀಳೋ ಸ್ಥಿತಿ ನಿರ್ಮಾಣವಾಗಿದೆ.

ಗುಡಿಸಲಿನಲ್ಲಿ ಜೀವನ ನಡೆಸ್ತಿದ್ದ ಮೋಸಸ್ ಅರೋನ್ ಕುಟುಂಬ ಮಾರುತಿನಗರದಲ್ಲಿ ಪುಟ್ಟ ಮನೆ ಕಟ್ಟಿದ್ದಾರೆ. ಮೊದಲು ಮನೆ ಕಟ್ಟಲು ಪರವಾನಗಿ ಕೊಟ್ಟಿದ್ದ ಮಹಾನಗರ ಪಾಲಿಕೆ ಈಗ ತಕರಾರು ತೆಗೆದಿದೆ.

ಅನಧಿಕೃತವಾಗಿ ಮನೆ ಕಟ್ತಿದ್ದಾರೆ ಅಂತಾ ಹೇಳಿ ಮನೆ ಕಾಮಗಾರಿ ನಿಲ್ಲಿಸಿದ್ದಾರೆ. ಅಲ್ಲದೇ ಮನೆ ನಿರ್ಮಾಣ ಮಾಡ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೊಂದು ಕಡೆ ಶಾಸಕರ ಹೆಸರೇಳಿಕೊಂಡು ಕಾಂಗ್ರೆಸ್ ಕಾರ್ಯಕರ್ತ ಫಾರುಕ್ ಎಂಬಾತ ಮನೆ ಕಟ್ಟದಂತೆ ಮನೆ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ. ಸಾಲದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ.

ಇದ್ರಿಂದ ಮೋಸಸ್ ಅರೋನ್ ಕುಟುಂಬ ನಿತ್ಯ ಜೀವಭಯದಲ್ಲೇ ಕಾಲ ಕಳೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *