ಡಿಕೆಶಿ ಪಿಎ ಎಂದು ಹೇಳ್ಕೊಂಡು ಲಕ್ಷಾಂತರ ರೂಪಾಯಿ ದೋಖಾ

Public TV
1 Min Read

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಿಎ ಅಂತ ಹೇಳ್ಕೊಂಡು ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ದೋಖಾ ಮಾಡಿದ್ದಾನೆ.

ಕನಕಪುರ ಮೂಲದ ಪುಟ್ಟಸ್ವಾಮಿ ಲಕ್ಷಾಂತರ ರೂಪಾಯಿ ದೋಖಾ ಆರೋಪ ಎದುರಿಸುತ್ತಿರುವ ವ್ಯಕ್ತಿ. ಆರೋಪಿಯು ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಹೀಗಾಗಿ ಹಣ ಗಳಿಸುವ ಉದ್ದೇಶದಿಂದ ಜನರನ್ನು ನಂಬಿಸಿ, ಮೋಸ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಆರೋಪಿ ಪುಟ್ಟಸ್ವಾಮಿ ತಾನು ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಹಾಗೂ ಪಿಎ ಎಂದು ಹೇಳಿಕೊಂಡಿದ್ದ. ಹೀಗಾಗಿ ಕೇಂದ್ರಿಯ ವಿದ್ಯಾಲಯದಲ್ಲಿ ಸೀಟ್ ಕೊಡುಸುತ್ತೇನೆ, ಲೋನ್ ಕೊಡಿಸುತ್ತೇನೆ ಅಂತ ನಂಬಿಸಿ ಹಣ ಪಡೆದಿದ್ದ. ಒಂದು ವೇಳೆ ಹಣ ಇಲ್ಲವೆಂದು ಹೇಳಿದರೆ ಖಾಲಿ ಚೆಕ್  ಪಡೆಯುತ್ತಿದ್ದ ಎಂದು ವಂಚನೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *