ಗದಗನಲ್ಲಿ ಹಿರಿಯ ಹಾಸ್ಯನಟ ದೊಡ್ಡಣ್ಣನ ಪುತ್ರನ ಮದುವೆ ಸಂಭ್ರಮ

Public TV
1 Min Read

ಗದಗ: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಾಸ್ಯ ನಟ ದೊಡ್ಡಣ್ಣ ಅವರು ಗದಗ ನಗರದಲ್ಲಿ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಗದಗನಲ್ಲಿ ವ್ಯಾಪಾರಸ್ಥರಾಗಿರುವ ಅಂದಾನಪ್ಪ ಗುಗ್ಗರಿ ಅವರ ಪುತ್ರಿ ಜ್ಯೋತಿ ಅವರೊಂದಿಗೆ, ದೊಡ್ಡಣ್ಣ ಅವರ ಪುತ್ರ ಸೂಗುರೇಶ್ ಅವರ ವಿವಾಹವು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೆರವೇರಿತು. ಜ್ಯೋತಿ ಇಂದು ದೊಡ್ಡಣ್ಣ ಅವರ ಮನೆ ಬೆಳಗೋಕೆ ಅವರ ಕುಟುಂಬದೊಡನೆ ಒಂದಾದರು. ಬೆಳಗ್ಗೆಯಿಂದಲೇ ಕಲ್ಯಾಣ ಮಂಟಪದಲ್ಲಿ ಜನಜಾತ್ರೆ ನೆರೆದಿತ್ತು.

ಚಿತ್ರರಂಗದವರ ಮದುವೆಯೆಂದರೆ ಸಾಕು ಅಲ್ಲಿ ಒಂದು ಆಡಂಬರ ಹೆಚ್ಚಾಗಿರುತ್ತದೆ. ಆದರೆ ದೊಡ್ಡಣ್ಣ ಅವರು ತಮ್ಮ ಮಗನ ಮದುವೆಯನ್ನು ಬಹಳ ಸಿಂಪಲ್ ಆಗಿ ಮಾಡಿದರು. ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಹೃದಯವಂತರು, ಅವರ ಮಾತು ಸಿಹಿ. ಹೀಗಾಗಿ ಇಲ್ಲಿಯೇ ಮದುವೆ ಮಾಡಲಾಗಿದೆ. ಈ ಭಾಗದ ಹೆಣ್ಮಗಳು ನಮ್ಮ ಮನೆ ಬೆಳಗೋಕೆ ಬಂದಿರುವದು ನನಗೆ ಸಂತಸ ತಂದಿದೆ ಎಂದು ದೊಡ್ಡಣ್ಣ ಹೇಳಿದರು.

ಕಲ್ಯಾಣ ಮಂಟಪಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ವಧುವರರನ್ನು ಆಶೀರ್ವಾದಿಸಿದರು. ಈ ಭಾಗದಿಂದ ಸಿನಿಮಾ ಕ್ಷೇತ್ರದ ಹಿರಿಯ ಕಲಾವಿದರೊಬ್ಬರ ಮನೆಗೆ ಹೆಣ್ಣು ಕೊಟ್ಟಿದ್ದು ನಮಗೂ ಸಂತಸ ತಂದೆ ಎಂದು ಅಂದಾನಪ್ಪ ಗುಗ್ಗರಿ ಕುಟುಂಬಸ್ಥರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *