ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ಹಾವು

Public TV
1 Min Read

ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ.

ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ-73ರ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ 5 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

ಸಿಎಂ ಯಡಿಯೂರಪ್ಪ ಕಾಮಗಾರಿ ಲೋಕಾರ್ಪಣೆ ಮಾಡುವ ಸಮಾರಂಭಕ್ಕೆ ನಗರದ ಚೇತನಾ ಕಾಲೇಜ ಹತ್ತಿರದ ಮೈದಾನಲ್ಲಿ ಬೃಹತ್ತಾಕಾರದಲ್ಲಿ ಸ್ಟೇಜ್ ಮಾಡಲಾಗಿದೆ. ಸ್ಟೇಜ್ ವೇದಿಕೆಯ ಒಂದು ಟೇಬಲ್ ದಲ್ಲಿ ಕೆರೆ ಹಾವು ಕಂಡು ಬಂದಿದೆ. ಹಾವನ್ನ ನೋಡಿದ ಅಧಿಕಾರಿಗಳು ಕೆಲಕಾಲ ಚಕಿತರಾಗಿದ್ದು ಕಂಡು ಬಂದಿತು. ನಂತರ ಪೊಲೀಸರ ನೆರವಿನಿಂದ ಉರಗ ತಜ್ಞ ಸಂಗಮೇಶ್ ಅವರನ್ನು ಕರೆಸಿ ಆ ಹಾವನ್ನು ಹಿಡಿಸಲಾಯಿತು. ಹಾವು ಹಿಡಿದುಕೊಂಡು ಹೋದ ನಂತರ ಕಾರ್ಯಕ್ರಮದ ಸಿದ್ಧತೆಯನ್ನು ಇದೀಗ ಮುಂದುವರಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *