ಗ್ರಹಣದ ಎಫೆಕ್ಟ್ – ಎರಡು ದಿನ ಕೇರಳದಲ್ಲಿ ಸಿಎಂ ವಿಶೇಷ ಪೂಜೆ

Public TV
1 Min Read

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಳಗ್ಗೆ ಕೇರಳಕ್ಕೆ ತೆರಳಲಿದ್ದು, ಮುಂದಿನ 2 ದಿನಗಳ ಕಾಲ ಅವರು ಕೇರಳದ ವಿಶೇಷ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಪ್ರತಿ ವರ್ಷವೂ ಸಿಎಂ ಈ ಸಮಯದಲ್ಲಿ ಕೇರಳದ ಆನಂತಪದ್ಮನಾಭ ದೇವಾಯಲಕ್ಕೆ ಭೇಟಿ ನೀಡುತ್ತಾರೆ. ಇತ್ತಿಚೇಗಷ್ಟೇ ಸಿಎಂ ನಿವಾಸದಲ್ಲಿ ಹೋಮ ಹವನ ನಡೆಸಲಾಗಿತ್ತು. ಸಿಎಂ ಬಿಎಸ್‍ವೈ ಅವರ ಕುಟುಂಬಕ್ಕೆ ಆಪ್ತರಾಗಿರುವ ಅರ್ಚಕರ ಸಲಹೆ ಮೇರೆಗೆ ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ಡಿ.26 ರಂದು ಅಮಾವಾಸ್ಯೆ ಇದ್ದು, ಈ ಬಾರಿ ವೃಶ್ಚಿಕ ರಾಶಿ ಅವರು ಗ್ರಹಣ ದೋಷ ನಿವಾರಣೆಗೆ ವಿಶೇಷ ಹೋಮ ಹವನ ನಡೆಸುವ ಅನಿವಾರ್ಯತೆ ಇದೆ ಎನ್ನಲಾಗಿದೆ.

ಸಿಎಂ ಅವರದ್ದು ವೃಶ್ಚಿಕ ರಾಶಿ ಆಗಿದ್ದು, ಕೆಲ ದಿನಗಳ ಹಿಂದೆ ನಿವಾಸದಲ್ಲಿ ಸುದರ್ಶನ ನರಸಿಂಹಯಾಗವನ್ನು ಮಾಡಿದ್ದರು. ಕೇರಳದಲ್ಲಿ ಮಾಡಲಿರುವ ವಿಶೇಷ ಪೂಜೆ, ಹೋಮಗಳ ಇದರ ಮುಂದುವರಿದ ಭಾಗ ಎನ್ನಲಾಗಿದೆ. 26ರ ನಂತರ ಗ್ರಹಣ ದೋಷ ಇರುವುದರಿಂದಲೂ ಸಿಎಂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

ವಿಶೇಷ ಸಂದರ್ಭದಲ್ಲಿ ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮವನ್ನು ಮಾಡಲಾಗುತ್ತದೆ. ಮುಂದಿನ 3 ವರ್ಷಗಳ ಕಾಲ ಸರ್ಕಾರ ಸುಸ್ಥಿರವಾಗಿ ನಡೆದುಕೊಂಡು ಹೋಗುವ ಉದ್ದೇಶದಿಂದ ಈ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಪ್ರವಾಸದ ಸಂದರ್ಭದಲ್ಲಿ ಸಿಎಂ ಕುಟುಂಬ ಸದಸ್ಯರು ಹಾಗೂ ಆಪ್ತರಷ್ಟೇ ಸಾಥ್ ನೀಡಲಿದ್ದಾರೆ.

ಸಾಮಾನ್ಯವಾಗಿ ಗ್ರಹಣ ಸಂದರ್ಭದಲ್ಲಿ ಉಂಟಾಗಬಹುದಾದ ದೋಷವನ್ನು ನಿವಾರಿಸಲು ಈ ವಿಶೇಷ ಪೂಜೆ ನಡೆಯಲಿದೆ. ಕೇರಳ ರಾಜರಾಜೇಶ್ವರ ದೇವಾಲಯ ಸೇರಿದಂತೆ ಪ್ರಮುಖ 4 ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆನೆಯನ್ನು ದಾನ ಮಾಡಿದ್ದರು. ಬಿಎಸ್‍ವೈ ಅವರು ಸಿಎಂ ಆಗುವ ಮುನ್ನವೂ ಈ ದೇವಾಲಯಗಳಿಗೆ ಭೇಟಿ ನೀಡಿ ರಾತ್ರಿ ಇಡೀ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭವನ್ನು ನೆನೆಯಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *