ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪೊಲೀಸರ ಮೇಲೆ ಬಿಎಸ್‍ವೈ ಗರಂ!

Public TV
1 Min Read

ಬೆಂಗಳೂರು: ಇಂದು ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೊಲೀಸರ ಮೇಲೆ ಗರಂ ಆಗಿದ್ದಾರೆ. ರಾಜಭವನದಿಂದ ಹೊರ ಬಂದ ಯಡಿಯೂರಪ್ಪನವರಿಗೆ ಪೊಲೀಸರು ತಮ್ಮ ಖಾಸಗಿ ಕಾರನ್ನು ಹತ್ತಿ ಎಂದು ಹೇಳಿದ್ದಾರೆ.

ಈ ವೇಳೆ ಯಡಿಯೂರಪ್ಪ ಅವರು, ಏನ್ ತಮಾಷೆ ಮಾಡುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ನಂತರ ಯಡಿಯೂರಪ್ಪ ಸರ್ಕಾರಿ ಕಾರನ್ನು ಏರಿ ಹೊರಟರು.

ಯಡಿಯೂರಪ್ಪನವರ ಕಾರಿನ ಮುಂದೆ ಜೆಡಿಎಸ್ ಕಚೇರಿಯ ಸಿಬ್ಬಂದಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. ಪೊಲೀಸರು ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರು ಇರುವ ಬಸ್ ತಡೆದು ಯಡಿಯೂರಪ್ಪ ಕಾರನ್ನು ಬಿಟ್ಟಿದ್ದಾರೆ.

ಇದರಿಂದ ಆಕ್ರೋಶಗೊಂಡ ಸಿಬ್ಬಂದಿ, ಇನ್ನು ಅರ್ಧ ಗಂಟೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಅವರನ್ನು ಯಾಕೆ ತಡೆದಿದ್ದು ಯಾಕೆ? ಮೊದಲು ಕುಮಾರಸ್ವಾಮಿಯನ್ನು ಬಿಡಿ ಅಂತ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *