ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿದ್ರು ಸಿಎಂ- ಬಿಎಸ್‍ವೈ ರೋಡ್, ದೇವೇಗೌಡ ಸರ್ಕಲ್ ಅಂತ ಲೇವಡಿ

Public TV
1 Min Read

ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಏಟು-ತಿರುಗೇಟು ತೀವ್ರಗೊಂಡಿದ್ದು, ಮೋದಿ ಭಾಷಣವನ್ನೇ ಟಾರ್ಗೆಟ್ ಮಾಡಿ ಸಿಎಂ ಲೇವಡಿ ಮಾಡಿದ್ದಾರೆ.

ಕರ್ನಾಟಕ ಅಸೆಂಬ್ಲಿಗೆ ಮಾರ್ಗ ಯಾವುದು ಅಂತ ಮೋದಿ ಕೇಳ್ತಾರೆ. ನೇರವಾಗಿ ಬಿಎಸ್‍ವೈ ರೋಡ್‍ನಲ್ಲಿ ಹೋಗಿ. ವರುಣಾದಲ್ಲಿ ಯಡಿಯೂರಪ್ಪರನ್ನು ಮಾರ್ಗ ಮಧ್ಯೆ ಇಳಿಸಿ. ದೇವೇಗೌಡ ಸರ್ಕಲ್‍ನಲ್ಲಿ ಬಲಕ್ಕೆ ತಿರುಗಿ. ಮತ್ತೆ ಯೂ ಟರ್ನ್ ಮಾಡಿ ದೇವೇಗೌಡರನ್ನು ಅಲ್ಲೇ ಇಳಿಸಿ. ಕಾರ್ಯಪ್ಪ ಸರ್ಕಲ್‍ನಲ್ಲಿ ರೆಸ್ಟ್ ತಗೊಳ್ಳಿ, ಅಲ್ಲಲ್ಲ ತಿಮ್ಮಯ್ಯ ಸರ್ಕಲ್‍ನಲ್ಲಿ. ಅಲ್ಲಿ ಮತ್ತೆ ಯೂ ಟರ್ನ್ ಮಾಡಿ ಅಂತ ಚಾಣಾಕ್ಯ ಅಮಿತ್ ಶಾ ಮೋದಿಗೆ ಹೇಳ್ತಾರೆ. ಇದನ್ನೂ ಓದಿ: ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

ಅದಕ್ಕೆ ಮೋದಿ ಕರ್ನಾಟಕದಲ್ಲಿ ಇಷ್ಟೊಂದು ಗೊಂದಲನಾ ಅಂತ ಚಾಣಾಕ್ಯಗೆ ಮರುಪ್ರಶ್ನೆ ಹಾಕ್ತಾರೆ. ಮೋದಿ-ಶಾ ನಡುವಿನ ಸಂವಾದ ಅನ್ನೋ ರೀತಿಯಲ್ಲಿ ಮೋದಿ ಭಾಷಣಕ್ಕೆ ತಿರುಗೇಟು ನೀಡಿದ್ದಾರೆ. ಇತ್ತ ದೇವೇಗೌಡರು ಒಳ್ಳೆಯ ನಾಯಕ ಅಂತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೊಗಳಿದ್ದಾರೆ. ಇದನ್ನೂ ಓದಿ: ಕ್ರೈಂ ಸಿಟಿ ಅನ್ನೋ ಮೂಲಕ ಬೆಂಗ್ಳೂರಿಗರಿಗೆ ಅವಮಾನ- ಮೋದಿಗೆ ಸಿಎಂ ಟ್ವೀಟ್

Share This Article
Leave a Comment

Leave a Reply

Your email address will not be published. Required fields are marked *