ಬೆಂಗಳೂರು: ಮಾಹಿತಿ ಇದ್ದರೆ, ದಾಖಲೆ ಇದ್ದರೆ ಯಾರ ಮೇಲಾದ್ರೂ ಐಟಿ ರೇಡ್ ನಡೆಸಲಿ. ಹಾಗೇ ಬಿಜೆಪಿಯವರ ಮೇಲೂ ಐಟಿ ರೇಡ್ ಮಾಡಲಿ. ಈಶ್ವರಪ್ಪ ದುಡ್ಡು ಎಣಿಸುವ ಮಶೀನ್ ಇಟ್ಕೊಂಡಿದ್ದರು. ಅಲ್ಲೂ ರೇಡ್ ಮಾಡಲಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಹಿನ್ನಲೆಯಲ್ಲಿ ಮಾತನಾಡಿದ ಅವರು, ಐಟಿ ದಾಳಿಯನ್ನು ಕಾನೂನಾತ್ಮಕವಾಗಿಯೇ ಎದುರಿಸ್ತೇವೆ. ಇದು ರಾಜಕೀಯಪ್ರೇರಿತ ದಾಳಿ. ಡಿ.ಕೆ ಶಿವಕುಮಾರ್ ನಮ್ಮ ಸಚಿವ ಸಂಪುಟ ಸಹೋದ್ಯೋಗಿ. ರೇಡ್ ಮಾಡುವಾಗ ಸಿಆರ್ಪಿಎಫ್ ಕರೆಸಿದ್ದು ತಪ್ಪು. ಐಟಿ ಕಾಯ್ದೆಯಲ್ಲೂ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ. ಕೇಂದ್ರದ ಅಧಿಕಾರಿಗಳ ಸಹಾಯ ಪಡೆಯಬಹುದು ಅಂತಿದೆ. ಅದು ಸಿಆರ್ಪಿಎಫ್ ಅಂತೇನಿಲ್ಲ. ಇದು ಸಂವಿಧಾನ ವಿರೋಧಿ. ಇದನ್ನ ನಾನು ಖಂಡಿಸ್ತೇನೆ ಅಂದ್ರು.
ಹಾಗೇ ಬಿಜೆಪಿಯವರ ಮೇಲೂ ಐಟಿ ರೇಡ್ ಮಾಡಲಿ. ಬಿಜೆಪಿಯಲ್ಲಿ ಯಾರೂ ಇಲ್ವಾ? ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಈಶ್ವರಪ್ಪ ದುಡ್ಡು ಎಣಿಸುವ ಮಶೀನ್ ಇಟ್ಕೊಂಡಿದ್ದರು. ಹೋಗಿ ಈಶ್ವರಪ್ಪ ಮೇಲೆ ಐಟಿ ದಾಳಿ ಮಾಡಲಿ ಅಂತ ಹೇಳಿದ್ರು.
ಐಟಿ ದಾಳಿ ಮುಕ್ತಾಯವಾದ ಬಳಿಕ ಸಚಿವ ಡಿಕೆಶಿ ಹೇಳಿದ್ದಿಷ್ಟು https://t.co/t1XWAHHXWR#Bengaluru #ITRaid #DKShivakumar pic.twitter.com/gFqvdNHG3j
— PublicTV (@publictvnews) August 5, 2017
2 ದಿನಗಳ ಬಳಿಕ ಹೊರಬಂದು ಅಭಿಮಾನಿಗಳಿಗೆ ಕೈ ಮುಗಿದ ಡಿಕೆಶಿ- ನೀವ್ಯಾಕ್ರೋ ಇಲ್ಲಿದ್ದೀರಾ? ಮನೆಗೆ ಹೋಗಿ ಅಂದ್ರು https://t.co/wQf1GQNiCa #DKShivakumar #ITRaid pic.twitter.com/M6hg4Jjb7v
— PublicTV (@publictvnews) August 5, 2017
ಯಾವುದೇ ಕ್ಷಣದಲ್ಲಿ ಡಿಕೆಶಿ ಬಂಧನ ಸಾಧ್ಯತೆ- ಐಟಿ ರೇಡ್ನಲ್ಲಿ ಸಿಕ್ಕ ಆಸ್ತಿಪಾಸ್ತಿಯ ಮೌಲ್ಯವೆಷ್ಟು ಗೊತ್ತಾ? https://t.co/nZLxcP65jQ #DKShivakumar #ITRaid pic.twitter.com/iqf1TRBbYS
— PublicTV (@publictvnews) August 5, 2017