ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

Public TV
1 Min Read

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಗನ ಮೇಲೆ ಸಿಎಂ ಸಿದ್ದರಾಮಯ್ಯಗೆ ಫುಲ್ ಲವ್ವು. ಕೆಜೆ ಜಾರ್ಜ್ ಪುತ್ರ ರಾಣಾ ತನ್ನ ಸ್ವಂತ ವಾಹನದಲ್ಲಿ ಕಾಡಿನೊಳಗೆ ಸವಾರಿ ಮಾಡೋಕೆ ಸಿಎಂ ಸಿದ್ದರಾಮಯ್ಯ ಪರ್ಮಿಷನ್ ಕೊಟ್ಟಿದ್ದಾರೆ.

ತನ್ನ ಆಪ್ತನ ಮಗನ ಸವಾರಿಗಾಗಿ ಅನುಮತಿ ಪತ್ರವನ್ನ ಅರಣ್ಯ ಇಲಾಖೆಗೆ ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ. ಕೇಂದ್ರ ಪರಿಸರ ಇಲಾಖೆ ಬೇಡ ಅಂದ್ರೂ ತಲೆ ಕೆಡಿಸಿಕೊಳ್ಳದೇ ಮತ್ತೆ ಸಿಎಂ ಅನುಮತಿ ನೀಡಿದ್ದಾರೆ.

 

ಕಾಡಿನೊಳಗೆ ಸ್ವಂತ ವಾಹನದಲ್ಲಿ ಸವಾರಿಗೆ ರಾಣಾ ಸಿಎಂ ಕಚೇರಿಯಿಂದ ಅನುಮತಿ ಕೇಳಿದ್ರು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕೇಂದ್ರಕ್ಕೆ ಮಾಹಿತಿ ಹೋದಾಗ ಯಾರಿಗೂ ಸ್ವಂತ ವಾಹನದಲ್ಲಿ ಹೋಗೋದಕ್ಕೆ ಅನುಮತಿ ಇಲ್ಲ ಅಂತಾ ಖಡಕ್ ಆದೇಶ ಕೊಟ್ಟಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ ತನ್ನ ಆಪ್ತನ ಮಗನ ಸವಾರಿಗೆ ಯಾರ್ರೀ ಅಡ್ಡಿ ಮಾಡೋದು, ನೀನು ಹೋಗಿ ಬಾ ಕಂದ ಅಂತಾ ಅನುಮತಿ ಪತ್ರವನ್ನು ಅರಣ್ಯ ಇಲಾಖೆಗೆ ರವಾನಿಸಿದ್ದಾರೆ.

ಈ ಹಿಂದೆ ರಾಣಾ ಕಾಡಲ್ಲಿ ಸ್ನೇಹಿತರ ಜೊತೆ ಹೋಗಿ ಗುಂಡು ಪಾರ್ಟಿ ಮಾಡಿ ವಿವಾದಕ್ಕೀಡಾಗಿದ್ರು. ಈಗ ಬೋರ್ಡ್ ಮೆಂಬರ್ ಆಗಿರುವ ರಾಣಾಗೆ ಗ್ರೀನ್ ಸಿಗ್ನಲ್ ಸಿಎಂ ಕಡೆಯಿಂದಲೇ ಸಿಕ್ಕಿದೆ.

 

ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

Share This Article
Leave a Comment

Leave a Reply

Your email address will not be published. Required fields are marked *