ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ : ಸಿಎಂ ಇಬ್ರಾಹಿಂ

Public TV
1 Min Read

ಬೆಂಗಳೂರು: ಬೇರೆಯವರು ತಾಳಿಕಟ್ಟಿದವರ ಬಳಿ ಹೋಗಿ ಲವ್ ಲೆಟರ್ ಬರೆದರೆ ಆಗುತ್ತಾ ಎಂದು ಜೆಡಿಎಸ್ ಶಾಸಕ ಸಿಎಂ ಇಬ್ರಾಹಿಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಕದ ಮನೆಯವನ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ, ಇದು ನೈತಿಕತೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಜೊತೆ ಡೀಲ್, ಸಿದ್ದರಾಮಯ್ಯ ಬಣ್ಣ ಬಯಲಾಯ್ತು: ಹೆಚ್‌ಡಿಕೆ ಬಾಂಬ್

ಶ್ರೀನಿವಾಸ್ ನಮ್ಮ ಬಳಿ ಜೆಡಿಎಸ್‍ಗೆ ಮತ ಹಾಕ್ತೀವಿ ಅಂತಾ ಹೇಳಿದ್ದಾರೆ. ಎಲ್ಲರೂ ಮತ ಹಾಕುತ್ತಾರೆ ಅಂತಾ ನಮಗೆ ಭರವಸೆ ಇದೆ. ದೇವರು ನಮ್ಮ ಪಕ್ಷದ 35 ಅಭ್ಯರ್ಥಿಗಳಿಗೆ ಒಳ್ಳೆ ಬುದ್ಧಿ ಕೊಡುತ್ತಾನೋ ಕಾದು ನೋಡಬೇಕಿದೆ. ಲೆಹರ್ ಸಿಂಗ್ ಕನ್ನಡದವರಾ? ಸಿದ್ದರಾಮಯ್ಯ ಕನ್ನಡಕ್ಕಾಗಿ ಕೈ ಎತ್ತು ಅಂತಾರೆ. ಅವರೇನು ಬಡವರಾ? ನಮ್ಮದು ಹಳ್ಳಿಲಿ ಆಫೀಸ್ ಇರೋದು ಉಳಿದ ಪಕ್ಷಗಳಂತೆ ದೆಹಲಿಯಲ್ಲಿ ಇಲ್ಲ. ಜೆಡಿಎಸ್ ಇವತ್ತು ಬದುಕುತ್ತಿರುವುದು ಸತ್ಯ ಧರ್ಮದ ಆಧಾರದ ಮೇಲೆ. ನಮ್ಮದು ಬಡವರ ಪಕ್ಷ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿಟಿ ರವಿ!

Share This Article
Leave a Comment

Leave a Reply

Your email address will not be published. Required fields are marked *