ಕಾಂಗ್ರೆಸ್‍ನಿಂದ ಹೊರಬಂದಿದ್ದೇನೆ ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಪ ಹಾಕಿದ: ಇಬ್ರಾಹಿಂ

Public TV
1 Min Read

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೇನೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ, ನನ್ನ ಶಾಪ ಭಾರೀ ಕೆಟ್ಟದ್ದು, ಇವಾಗ ತಟ್ಟುತ್ತೀದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ ಎಂದು ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ಶಾಪ ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಎಂಎಲ್‍ಸಿ ಮಾಡಿರುವುದು ಸಿದ್ದರಾಮಯ್ಯ ಎಂದು ಹೇಳುತ್ತಾರೆ. ನಾಳೆನೇ ರಾಜೀನಾಮೆ ಕೊಡುತ್ತೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

ಡಿಕೆಶಿ ಬಹಳ ದೊಡ್ಡವರು ನಮ್ಮಂತವರನ್ನು ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುತ್ತೇನೆ ಎಂದರು ಆದ್ರೆ ಏನು ಆಗಿಲ್ಲ. ಇವತ್ತು ಎಸ್.ಆರ್ ಪಾಟೀಲ್ ಬೇಟಿಯಾಗುತ್ತಾರೆ. ಏನ್ ಆಗುತ್ತೆ ನೋಡೋಣ ನಮ್ಮ ಜೊತೆ ಯಾರ ಬರ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇನೆ. ಇಲ್ಲಿ ಅಲಿಂಗ ಮಾಡುತ್ತೇನೆ (ಅಲ್ಪಸಂಖ್ಯಾತ-ಲಿಂಗಾಯತರು), ಅಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡುತ್ತೇನೆ. ಅವರು ಅಹಿಂದ ಮಾಡಿದ್ದರು ಎಂದು ಸಿದ್ದರಾಮಯ್ಯರಿಗೆ ಟಕ್ಕರ್ ನೀಡಿದರು. ಇದನ್ನೂ ಓದಿ: ಜೆಡಿಎಸ್ ಸೇರುವಂತೆ ಸಿಎಂ ಇಬ್ರಾಹಿಂಗೆ ಹೆಚ್‍ಡಿಕೆ ಆಹ್ವಾನ

ನನ್ನನ್ನ ನೀವು ಬೆಳೆಸಿದ್ದೀರಿ ಇನ್ನೂ ಮುಂದೆಯೂ ನೀವೆ ಕೈ ಹಿಡಿಯಬೇಕು ಎಂದು ಮಾಧ್ಯಮದವರ ಮುಂದೆ ಇಬ್ರಾಹಿಂ ಭಾವಕರಾಗಿ ಕಣ್ಣೀರು ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *