ವಿಧಾನಸಭೆಯಲ್ಲಿ ಬಿಎಸ್‍ವೈಗೆ ಎಚ್‍ಡಿಕೆ ತಿರುಗೇಟು- ಇತ್ತ ಬಿಜೆಪಿಯಿಂದ ಸಾಲಮನ್ನಾ, ಬಜೆಟ್ ತಾರತಮ್ಯ ಅಸ್ತ್ರ

Public TV
1 Min Read

ಬೆಂಗಳೂರು: ರೈತರ ಸಾಲ ಮನ್ನಾದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಮಾತಾಡ್ತಾರೆ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ಕೊಡಲಿರುವ ಅವರು, ವಿಪಕ್ಷ ನಾಯಕ ಯಡಿಯೂರಪ್ಪ ಮಾಡಿದ್ದ ಟೀಕೆಗೆ ತಿರುಗೇಟು ಕೊಡಲಿದ್ದಾರೆ.

ಬಜೆಟ್‍ನಲ್ಲಿ ಜೆಡಿಎಸ್ ಗೆದ್ದಿರುವ ಜಿಲ್ಲೆಗಳಿಗಷ್ಟೇ ಮಣೆ ಹಾಕಿರೋ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಬಗ್ಗೆ ತಾರತಮ್ಯ ಮಾಡಿದ್ದಾರೆ ಅನ್ನೋ ಟೀಕೆಗೂ ಸ್ಪಷ್ಟನೆ ನೀಡೋ ಸಾಧ್ಯತೆ ಇದೆ. ಕುಮಾರಸ್ವಾಮಿ ಭಾಷಣಕ್ಕೂ ಮೊದಲು ಉಪ ಸಭಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಇನ್ನು ವಿಧಾನಪರಿಷತ್‍ನಲ್ಲಿ ಇವತ್ತು ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದ್ದು, ರೈತರ ಸಂಪೂರ್ಣ ಸಾಲ ಮನ್ನಾದ ಮಾತು ತಪ್ಪಿರುವ ಕುಮಾರಸ್ವಾಮಿಯನ್ನು ಬಿಜೆಪಿ ಟಾರ್ಗೆಟ್ ಮಾಡೋದು ನಿಶ್ಚಿತ.

ರಾಮನಗರ, ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಜೆಡಿಎಸ್ ಭದ್ರಕೋಟೆಗಷ್ಟೇ ಅನುದಾನ ನೀಡಿ ಕರಾವಳಿ ಕರ್ನಾಟಕ, ಮಲೆನಾಡು, ಉತ್ತರ ಕರ್ನಾಟಕವನ್ನು ಕಡೆಗಣಿಸಿರೋದನ್ನೂ ಖಂಡಿಸಿ ಬಿಜೆಪಿ ಸದನದೊಳಗೆ ಹೋರಾಟ ನಡೆಸಲಿದೆ.

Share This Article
Leave a Comment

Leave a Reply

Your email address will not be published. Required fields are marked *