ಯಾವ ಆತಂಕವೂ ಬೇಡ, ಕ್ಯಾಬಿನೆಟ್‍ಗೆ ಬನ್ನಿ ಎಲ್ಲವೂ ಸರಿ ಆಗುತ್ತೆ: ಸಿಎಂ ಮಾತಿಗೆ ಸಚಿವರು ಅಚ್ಚರಿ

Public TV
1 Min Read

ಬೆಂಗಳೂರು: 15 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದರೂ ಸಹ ಸಿಎಂ ಕೂಲ್ ಆಗಿಯೇ ಸಚಿವರಿಗೆ ಖುದ್ದು ಕರೆ ಮಾಡಿ ಮಾತನಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಮುಖ್ಯಮಂತ್ರಿ ಖುದ್ದಾಗಿ ಸಚಿವರಿಗೆ ಕರೆ ಮಾಡಿ, ಯಾವ ಆತಂಕವೂ ಬೇಡ, ಕ್ಯಾಬಿನೆಟ್‍ಗೆ ಬನ್ನಿ ಎಲ್ಲವೂ ಸರಿ ಆಗುತ್ತೆ ಎಂದು ವಿಶ್ವಾಸದಿಂದ ಮಾತನಾಡಿದ್ದಾರೆ. ಸಿಎಂ ವಿಶ್ವಾಸದಿಂದ ಮಾತನಾಡಿದ್ದನ್ನು ನೋಡಿ ಸಚಿವರು ಅಚ್ಚರಿಗೊಂಡಿದ್ದಾರೆ.

ಸಿಎಂ ಕರೆ ಬಂದಾಗ ಮಹತ್ವದ ವಿಚಾರ ಹೇಳ್ತಾರೇನೋ ಎಂದು ಸಚಿವರು ಎಂದುಕೊಂಡಿದ್ದರು. ಆದರೆ ಸಿಎಂ ಈ ರೀತಿ ಮಾತನಾಡಿದ್ದನ್ನು ನೋಡಿ ಸಚಿವರು ಶಾಕ್ ಆಗಿದ್ದಾರೆ. ಸಿಎಂ ಅವರ ಈ ವಿಶ್ವಾಸಕ್ಕೆ ಕಾರಣ ಯಾರು ಎಂಬ ಪ್ರಶ್ನೆ ಈಗ ಮೂಡಿದೆ.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕೊನೆಯ ಪ್ರಯತ್ನಕ್ಕೆ ಮುಂದಾದಂತೆ ಕಾಣುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿಗಳು, ಎರಡೂ ಪಕ್ಷಗಳ ಸಚಿವರೊಂದಿಗೆ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಅಲ್ಪಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರಕ್ಕೆ ಅತೃಪ್ತ ಶಾಸಕರು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *