ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

Public TV
1 Min Read

ಬೆಂಗಳೂರು: ಇಂದು ಇಡೀ ದಿನ ಟೈಮ್ ತೆಗೆದುಕೊಳ್ಳಿ ನಾಳೆ ಬೆಳಗ್ಗೆ ಫೈನಲ್ ಆಗಬೇಕು. ಸೋಮವಾರ ನೀವು ಪ್ರಚಾರಕ್ಕೆ ಇಳಿಯಲೇಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಾರ್ನ್ ಮಾಡಿದ್ದಾರೆ.

ಬಚ್ಚೇಗೌಡರ ಜೊತೆ ಕೊನೆಯ ಬಾರಿ ಮಾತುಕತೆ ನಡೆಸಿದ ಯಡಿಯೂರಪ್ಪ, ದಿನಕ್ಕೆ ಎರಡು `ಹೊಸ’ ಕಡೆ ಪ್ರಚಾರ ಮಾಡ್ಲೇಬೇಕು. ಸೋಮವಾರದೊಳಗೆ ಪ್ರಚಾರಕ್ಕೆ ಇಳಿಯಬೇಕು. ಇಲ್ಲದಿದ್ದರೆ ಪಕ್ಷ ವಿಧಿಸೋ ಕ್ರಮವನ್ನು ಎದುರಿಸಿ. ನಿಮ್ಮ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದಿನಕ್ಕೆ ಎರಡು ಕಡೆಯಾದ್ರೂ ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಪ್ರಚಾರ ಮಾಡಿ. ಇನ್ನೆರಡು ದಿನವಾದ್ರೂ ಟೈಮ್ ತೆಗೆದುಕೊಂಡು ಪ್ರಚಾರಕ್ಕೆ ಬನ್ನಿ ಎಂದು ಸಂದೇಶ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಒಟ್ಟಿನಲ್ಲಿ ಬಿಜೆಪಿ, ಸಿಎಂ ಬಿಎಸ್‍ವೈ ವಾರ್ನಿಂಗ್‍ಗೆ ಬಚ್ಚೇಗೌಡರು ಮಣೀತಾರಾ ಅಥವಾ ಡೋಂಟ್ ಕೇರ್ ಎಂದು ಮಗನ ಪರ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

Share This Article
Leave a Comment

Leave a Reply

Your email address will not be published. Required fields are marked *