ಧಾರವಾಡ: ಅನಾರೋಗ್ಯದಿಂದ ನಿಧನ ಹೊಂದಿದ್ದ ಮಾಜಿ ಸಚಿವ ಮರಾಠ ಸಮಾಜದ ಹಿರಿಯ ಮುಖಂಡ ಎಸ್ಆರ್ ಮೋರೆ ಅವರ ಮನೆಗೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದರು.
ಧಾರವಾಡ ನಗರದಲ್ಲಿರುವ ಮೋರೆ ಫಾರ್ಮ್ ತೋಟದ ಮನೆಗೆ ಭೇಟಿ ನೀಡಿ ಎಸ್ಆರ್ ಮೋರೆ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋರೆಯವರು ಈ ಭಾಗದ ಹಿರಿಯ ನಾಯಕರು, ನಾಲ್ಕು ದಶಕಗಳಷ್ಟು ಸಾರ್ವಜನಿಕ ಸೇವೆ ಮಾಡಿದವರು, ಅವರ ನಿಧನ ದುಃಖ ತಂದಿದೆ ಎಂದರು.
ಮೋರೆ ಜನರ ಪ್ರೀತಿಗೆ ಪಾತ್ರರಾದವರು, ಧಾರವಾಡ ಅಭಿವೃದ್ಧಿ ಬಗ್ಗೆ ಬಹಳಷ್ಟು ಕಳಕಳಿ ಅವರಿಗಿತ್ತು. ಮೋರೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದವರು, ಇದೀಗ ಈ ಭಾಗದ ಓರ್ವ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್
ಪಕ್ಷ ಬೇರೆ ಇದ್ದರೂ ಮೋರೆಯವರ ಜೊತೆ ವೈಯಕ್ತಿಕ ಸಂಬಂಧ ಇತ್ತು. ಅಭಿವೃದ್ಧಿಗಾಗಿ ನಾವು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಅದೆಲ್ಲವೂ ಈಗ ನೆನಪು ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಮುಖ್ಯಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಮುರುಗೇಶ್ ನಿರಾಣಿ