ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ – ಸಾವಿನ ಸಂಖ್ಯೆ 7ಕ್ಕೆ ಏರಿಕೆ

Public TV
3 Min Read

-ಜೂ.28ರಿಂದ ಜು.3ರವರೆಗೆ ಭಾರೀ ಮಳೆ ಸಾಧ್ಯತೆ

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಐದು ಸ್ಥಳಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಪ್ರವಾಹದಲ್ಲಿ ಇದುವರೆಗೆ 7 ಮಂದಿ ಮೃತಪಟ್ಟಿದ್ದು, ಇನ್ನೂ ಕೆಲವರು ಕಾಣೆಯಾಗಿದ್ದಾರೆ.

ಈ ಪ್ರವಾಹದಿಂದಾಗಿ ಧರ್ಮಶಾಲಾ (Dharmashala) ಮತ್ತು ಕುಲ್ಲು (Kullu) ಪ್ರದೇಶದ ಆರು ಜನರು ಕಾಣೆಯಾಗಿದ್ದಾರೆ. ಈಗಾಗಲೇ ಮನುನಿ ಖಾದ್‌ನಲ್ಲಿ ಕೊಚ್ಚಿ ಹೋಗಿದ್ದ ಓರ್ವ ಕಾರ್ಮಿಕನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ತಂಡಗಳು ಹಾಗೂ ಸ್ಥಳೀಯರು ಶೋಧಕಾರ್ಯ ಮುಂದುವರೆಸಿದ್ದಾರೆ.ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಬೆಂಬಲಿಸಿದ ನಿವೃತ್ತ ಸಿಜೆಐ ಚಂದ್ರಚೂಡ್‌

ಈ ಕುರಿತು ಹಿಮಾಚಲದ ಜಿಲ್ಲಾಧಿಕಾರಿ ಕಾಂಗ್ರಾ ಶಿಲ್ಪಿ ಬೆಕ್ತಾ ಮಾತನಾಡಿ, ಸದ್ಯ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆಹಚ್ಚುವುದು ನಮ್ಮ ಮುಖ್ಯ ಗುರಿಯಾಗಿದೆ. ಹೀಗಾಗಿ ಸ್ಥಳದಲ್ಲಿ ಹಿಮಾಚಲ ಪ್ರದೇಶ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನ 50 ಸದಸ್ಯರ ತಂಡ ಸ್ಥಳದಲ್ಲಿದೆ. ಗೃಹರಕ್ಷಕ ದಳದ ತಂಡವನ್ನು ನಿಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಮೇಘಸ್ಫೋಟದಿಂದಾಗಿ ಅಲ್ಲಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದ್ದು, ಕುಲ್ಲುವಿನ ಸೈನ್ಜ್ನಲ್ಲಿ ಕೊಚ್ಚಿಹೋದ ಕುಟುಂಬದ ಮೂವರು ಸದಸ್ಯರು ಕಾಣೆಯಾಗಿದ್ದಾರೆ. ಇನ್ನೂ ತೀರ್ಥನ್ ನದಿಯಲ್ಲಿ ಓರ್ವ ವ್ಯಕ್ತಿ ಕೊಚ್ಚಿಹೋಗಿದ್ದಾನೆ. ಜೊತೆಗೆ ಮಂಡಿಯ ಧರಂಪುರದ ಜಲ್ಪಾ ದೇವಸ್ಥಾನದ ಬಳಿಯ ಬಿಯಾಸ್ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಭೂಸಿತದಿಂದಾಗಿ ಸೈನ್ಜ್‌ನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬುಧವಾರ ಮೇಘಸ್ಫೋಟದಿಂದಾಗಿ ಖಾನಿಯಾರಾದ ಮನುನಿ ಖಾದ್‌ನಲ್ಲಿ ಉಂಟಾದ ಪ್ರವಾಹದ ನಡುವೆ ಸೋಕ್ನಿ ಡಾ ಕೋಟ್‌ನಲ್ಲಿರುವ ಖಾಸಗಿ ವಿದ್ಯುತ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಜನರು ನಾಪತ್ತೆಯಾಗಿದ್ದಾರೆ ಮತ್ತೊಂದೆಡೆ, ಕುಲ್ಲುವಿನ ಸೈನ್ಜ್ನ ಜಿವಾನಾಲಾದಲ್ಲಿ ಮೇಘಸ್ಫೋಟದಿಂದಾಗಿ ನಂದ್ ಲಾಲ್ (72), ಮಗಳು ಮೂರ್ತಿ ದೇವಿ (15) ಮತ್ತು ಸಹೋದರಿ (67) ಯಾನ್ ದಾಸಿ ಕಾಣೆಯಾಗಿದ್ದಾರೆ.

ಜೂ.29 ರಂದು ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ಜೂ.28ರಿಂದ 30ರವರೆಗೆ ಮತ್ತು ಜು.1ರಿಂದ 3ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಗುರುವಾರ ರಾತ್ರಿ, ಪಾಂಡೋಹ್‌ನಲ್ಲಿ 139.0 ಮಿ.ಮೀ, ಜೋಗಿಂದರ್ ನಗರದಲ್ಲಿ 73.0 ಮಿ.ಮೀ, ಶಿಲಾರುವಿನಲ್ಲಿ 54.0 ಮಿ.ಮೀ, ಕಟೋಲಾದಲ್ಲಿ 45.2 ಮಿ.ಮೀ, ಸುಜನ್‌ಪುರ್ ತಿಹ್ರಾದಲ್ಲಿ 42.0 ಮಿ.ಮೀ, ಬೈಜ್‌ನಾಥ್‌ನಲ್ಲಿ 32.0 ಮಿ.ಮೀ, ರೋಹ್ರುವಿನಲ್ಲಿ 30.0 ಮಿ.ಮೀ, ಮಂಡಿಯಲ್ಲಿ 29.4 ಮಿ.ಮೀ, ನಿಚಾರ್‌ನಲ್ಲಿ 25.0 ಮಿ.ಮೀ, ಬಂಜಾರ್‌ನಲ್ಲಿ 24.0 ಮಿ.ಮೀ, ಮತ್ತು ಕರ್ಸೋಗ್‌ನಲ್ಲಿ 21.0 ಮಿ.ಮೀ ಮಳೆ ದಾಖಲಾಗಿದೆ.

ಮಳೆಗಾಲದಲ್ಲಿ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಂಡಿ ಜಿಲ್ಲಾಡಳಿತವು ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಆಯುಕ್ತ ಮತ್ತು ಅಧ್ಯಕ್ಷ ಅಪೂರ್ವ್ ದೇವಗನ್, ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು. NHAI, MORTHA, ಜಲವಿದ್ಯುತ್ ಯೋಜನೆಗಳು, ಲೋಕೋಪಯೋಗಿ ಇಲಾಖೆ, ಜಲಶಕ್ತಿ ಇಲಾಖೆ, ಪುರಸಭೆ ಸಂಸ್ಥೆಗಳು ಮತ್ತು ಪಂಚಾಯತ್‌ಗಳು ಆಯಾ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವರನ್ನು ತಕ್ಷಣವೇ ಅಪಾಯಕಾರಿ ಪ್ರದೇಶಗಳಿಂದ ಸ್ಥಳಾಂತರಿಸಬೇಕೆಂದು ಸೂಚಿಸಿದ್ದಾರೆ.

ಯಾವುದೇ ಅಧಿಕಾರಿ ಈ ಆದೇಶವನ್ನು ಪಾಲಿಸದಿದ್ದರೆ, ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನದಿಗಳು, ಚರಂಡಿಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಅನಗತ್ಯವಾಗಿ ಹೋಗಬೇಡಿ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್‌ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!

Share This Article