ಬೆಂಗಳೂರು: ಡಿಸಿಎಂ ಹತ್ತಿರ ಬಟ್ಟೆ ತೆಗೆದುಕೊಳ್ಳುವ ದರಿದ್ರ ನನಗೆ ಬಂದಿಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತೆ ತಿರುಗೇಟು ನೀಡಿದರು.
ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಹೆಚ್ಡಿಕೆ (HD Kumaraswamy) ಏನು ಹೇಳಿದ್ದರು? ಸರ್ಕಾರ ರಚನೆಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂದಿದ್ದರು. ಅದಕ್ಕೆ ನಾನು ಗಿಫ್ಟ್ ಕೊಡೋಣ ಅಂತ ಹೇಳಿದ್ದೆ. ಅವರ ಸರ್ಕಾರ ಬರೋದು ಇಲ್ಲ, ಅವರು ಗೆಲ್ಲೋದು ಇಲ್ಲ. ಅವರ ಸರ್ಕಾರ ಬರುತ್ತಾ? ಅದು ಸಾಧ್ಯನಾ? ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ – ಡಿಕೆಶಿಗೆ ಹೆಚ್ಡಿಕೆ ತಿರುಗೇಟು
ಇದೇ ವೇಳೆ ವಸತಿ ನಿಗಮದಲ್ಲಿ ಲಂಚದ ಬಗ್ಗೆ ಬಿ.ಆರ್.ಪಾಟೀಲ್ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅದು ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿದರು.
ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಶೇ.15ರಷ್ಟು ಮೀಸಲಾತಿಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ನಾವೂ ಯಾರದ್ದೂ ಕಿತ್ತು ಕೊಡುತ್ತಿಲ್ಲ. ವರದಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಜನ ಇಲ್ಲ ಅಂತಿತ್ತು. ಹಿಂದೆ ನಾನೇ ಪರಿಶೀಲನೆ ಮಾಡಿದಾಗ 10% ಮೈನಾರಿಟಿಗಿತ್ತು. ಕ್ಯಾಬಿನೆಟ್ನಲ್ಲಿ ಕುಲಂಕುಶವಾಗಿ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ಅಂತ ಜನರಲ್ಗೆ, ಒಬಿಸಿಗೂ ಮಾಡಿ ಕೊಟ್ಟಿದ್ದೇವೆ. ಅವರು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ. ವಿಧಾನಸಭೆಯಲ್ಲಿ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್ ವೈ