ರೈಲ್ವೆ ಸೇತುವೆ ತಡೆ ಕಂಬಿ ಕಳಚಿ ಬಿದ್ದು ಮಹಿಳೆಯ ಕೈ ಕಟ್

Public TV
1 Min Read

ಚಿತ್ರದುರ್ಗ: ರೈಲ್ವೆ ಸೇತುವೆ ತಡೆ ಕಂಬಿ ಕಳಚಿ ಬಿದ್ದು ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಕೈ ಮುರಿದಿರುವ ಘಟನೆ ಚಿತ್ರದುರ್ಗದ ಪಿಳ್ಳಕ್ಯಾರನಹಳ್ಳಿ ಬಳಿ ನಡೆದಿದೆ.

ಜೆಸಿಬಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ರೈಲ್ವೆ ಸೇತುವೆ ತಡೆ ಕಂಬಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕೆಲ ಸಮಯದ ನಂತರ ತಡೆ ಕಂಬಿ ಕುಸಿದು ಬಿದ್ದಿದ್ದು, ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜೆಎಮ್‍ಐಟಿ ಕಾಲೇಜು ಉಪನ್ಯಾಸಕಿ ಪುಷ್ಪ ಅವರ ಕೈ ಮುರಿದಿದೆ.

ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಗ್ರಾಮಾಂತರ ಪೊಲೀಸರು ಬಂದು ಸಂಚಾರ ಸುಗಮಗೊಳಿಸಿದ್ದಾರೆ. ಈ ಬಗ್ಗೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಇದುವರೆಗೂ ಇಂತಹ ಅಪಘಾತದಲ್ಲಿ 3 ಜನ ಮೃತಪಟ್ಟಿದ್ದಾರೆ. ಆದರೂ ರೈಲ್ವೆ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ತಿಂಗಳು ಇದೇ ಕಾರಣಕ್ಕೆ ಪ್ಯಾಸೆಂಜರ್ ರೈಲು ಹಳಿ ತಪ್ಪಿತ್ತು.

Share This Article
Leave a Comment

Leave a Reply

Your email address will not be published. Required fields are marked *