ಸಿಎಂಗೆ ಓಪನ್ ಚಾಲೆಂಚ್ ಮಾಡಿ, ಸಚಿವರ ಬೆವರಿಳಿಸಿದ ವಿದ್ಯಾರ್ಥಿನಿ!

Public TV
1 Min Read

ಚಿತ್ರದುರ್ಗ: ಸಿಎಂ ಅವರಿಗೆ ಪ್ರತಿಕ್ಷಗಳು ಓಪನ್ ಚಾಲೆಂಚ್ ಹಾಕುವುದನ್ನು ನೋಡಿದ್ದೇವೆ. ಆದ್ರೆ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಶಾಲೆಯನ್ನ ಬಿಟ್ಟು ಸರ್ಕಾರಿ ಶಾಲೆಗೆ ಸೇರೋದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ.

ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯ್ತು. ವೇದಿಕೆಯಲ್ಲಿ ಸಚಿವ ಹೆಚ್.ಆಂಜನೇಯ ಸರ್ಕಾರಿ ಶಾಲೆಯಲ್ಲಿ ಓದಿವದರು ಸಂವಿಧಾನ ರಚಿಸಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಿ ಯು.ಆರ್. ರಾವ್ ಸೇರಿದಂತೆ ಹಲವು ಗಣ್ಯರು ಸರ್ಕಾರಿ ಶಾಲೆಯಲ್ಲಿ ಕಲಿತು ಮಾಡಿದ ಸಾಧನೆ ಬಗ್ಗೆ ಭಾಷಣ ಮಾಡಿದ್ರು. ಅಲ್ಲದೆ ಸರ್ಕಾರಿ ಶಾಲೆಯನ್ನ ಉದಾಸೀನ ಮಾಡಬೇಡಿ ಅಂತಾ ಸಲಹೆ ನೀಡಿದ್ರು.

ಭಾಷಣದ ಮುಗಿದ ಬಳಿಕ ವೇದಿಕೆಯಿಂದ ಇಳಿದು ಬಂದ ಸಚಿವ ಆಂಜನೇಯ ಅವರನ್ನ ಅಡ್ಡಗಟ್ಟಿದ ವಿದ್ಯಾವಿಕಾಸ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನಯನಾ ತರಾಟೆಗೆ ತೆಗೆದುಕೊಂಡಳು.

ನಾನು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದಳು.

ನಮ್ಮ ಕನ್ನಡ ಶಾಲೆಗಳು ಉಳಿಯಬೇಕು ಅಂದ್ರೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳ ಮತ್ತು ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಮಕ್ಕಳು ಕನ್ನಡ ಶಾಲೆಗೆ ಬರಬೇಕು. ಇವರೆಲ್ಲರೂ ಕನ್ನಡ ಶಾಲೆಗೆ ಸೇರಿದರೆ ನಮ್ಮ ಕನ್ನಡ ಶಾಲೆಗಳು ಸುಧಾರಣೆಯಾಗುತ್ತದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಬೇಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿ ನಯನಾ ಸಚಿವರ ಬೆವರು ಇಳಿಸಿದ್ದಾಳೆ.

ಇದನ್ನೂ ಓದಿ:  ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕುರಿತು ಎಚ್ ಆಂಜನೇಯ ಪಾಠ!

Share This Article
Leave a Comment

Leave a Reply

Your email address will not be published. Required fields are marked *